ಕಳೆದ ಶನಿವಾರ ಈ ಘಟನೆ ನಡೆದಿದ್ದು, ಪಥ್ರಾರ್ಡಿ ಪಾರಾ ನಿವಾಸಿ, ವೃತ್ತಿಯಲ್ಲಿ ಶಾಲಾ ಶಿಕ್ಷಕನಾಗಿರುವ ಉಲ್ಲಾಸ್ ಚೌಧರಿ ಎನ್ನುವವರಿಗೆ ತಮ್ಮ ನಿವಾಸದ ಹತ್ತಿರದಲ್ಲಿ ಮಗುವೊಂದು ಅಳುತ್ತಿರುವುದು ಕೇಳಿತು. ತಕ್ಷಣ ಅಲ್ಲಿಗೆ ಓಡಿ ಹೋದ ಅವರು ಕಂಡದ್ದು ಮಾತ್ರ ಊಹಿಸಲಾಗದ ದೃಶ್ಯ. ಅಲ್ಲೊಂದು ನವಜಾತ ಶಿಶುವಿತ್ತು. ಅದನ್ನು ಕುಕ್ಕಿ ತಿನ್ನಲು ಕಾಗೆಗಳು ಪ್ರಯತ್ನಿಸುತ್ತಿದ್ದವು. ಆದರೆ ಬೀದಿನಾಯಿಗಳು ಅದರ ಸುತ್ತಲೂ ಕುಳಿತುಕೊಂಡು ರಕ್ಷಣೆಗಿಳಿದಿದ್ದವು. ಮಗುವಿನ ಬಳಿ ಬರುತ್ತಿದ್ದ ಕಾಗೆಗಳನ್ನು ಅವು ಓಡಿಸುತ್ತಿದ್ದವು.