ಅತ್ತಿಗೆಯ ಜೊತೆಗೆ ಅಸಭ್ಯವಾಗಿ ವರ್ತಿಸಿದ ತಮ್ಮನಿಗೆ ಅಣ್ಣ ಮಾಡಿದ್ದೇನು?

ಶನಿವಾರ, 13 ಜೂನ್ 2020 (08:51 IST)
ಲಕ್ನೋ : ಅತ್ತಿಗೆಯ ಜೊತೆಗೆ ಅಸಭ್ಯವಾಗಿ ವರ್ತಿಸಿದ ತಮ್ಮನನ್ನು ಅಣ್ಣ ಕೋಲಿನಿಂದ ಹೊಡೆದು ಕೊಂದ ಘಟನೆ ಉತ್ತರ ಪ್ರದೇಶದ ಆಗ್ರಾದ ಬಳಿಯ ಎತ್ಮಾಉದ್ದೌಲ್ ನ ಸುಶೀಲನಗರದಲ್ಲಿ ನಡೆದಿದೆ.


ಸಂಜಯ್ ಕೊಲೆಯಾದ ವ್ಯಕ್ತಿ, ಸುರೇಂದ್ರ ಸಿಂಗ್ ಕೊಲೆ ಮಾಡಿದ ಆರೋಪಿ. ಸಂಜಯ್ ಕುಡಿದು ಸುರೇಂದ್ರ ಸಿಂಗ್ ಪತ್ನಿಯ ರೂಂಗೆ ನುಗ್ಗಿ ಅಶ್ಲೀಲವಾಗಿ ವರ್ತಿಸಿದ್ದಾನೆ. ಇದರಿಂದ ಕೋಪಗೊಂಡ  ಸುರೇಂದ್ರ ಸಿಂಗ್  ಆತನನ್ನು ಕೋಣೆಯಲ್ಲಿ ಕೂಡಿಹಾಕಿ ಕೋಲಿನಿಂದ ಮನಬಂದಂತೆ ಥಳಿಸಿದ್ದಾನೆ. ಇದರಿಂದ  ಆತ ಮೃತಪಟ್ಟಿದ್ದಾನೆ.


ಈ ಬಗ್ಗೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಆರೋಪಿ ಅಣ್ಣನನ್ನು ಬಂಧಿಸಿ, ಕೊಲೆ ಬಳಸಿದ ಕೋಲನ್ನು ವಶಕ್ಕೆ ಪಡೆದಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ