ಅತ್ತಿಗೆಯೊಂದಿಗೆ ಸರಸ ಸಲ್ಲಾಪವಾಡಿದವನಿಗೆ ಮೈದುನ ಹೀಗಾ ಮಾಡೋದು?

ಬುಧವಾರ, 28 ಅಕ್ಟೋಬರ್ 2020 (07:25 IST)
ಗಾಜಿಯಾಬಾದ್ : ಮಹಿಳೆಯೊಂದಿಗೆ ಪ್ರೇಮ ಸಂಬಂಧ ಹೊಂದಿದ್ದ ಆರೋಪದ ಮೇಲೆ ವ್ಯಕ್ತಿಯೊಬ್ಬನನ್ನು ಕೊಲೆ ಮಾಡಿದ ಘಟನೆ ಉತ್ತರ ಪ್ರದೇಶದ ಗಾಜಿಯಾಬಾದ್  ಜಿಲ್ಲೆಯಲ್ಲಿ ನಡೆದಿದೆ.

ಲೋಕೇಶ್ ಪಾಂಚಾಲ್ ಕೊಲೆಯಾದ ವ್ಯಕ್ತಿ, ಸಂಜು, ವಿಶ್ವ ಮತ್ತು ಸೋನು ಕೊಲೆ ಮಾಡಿದ ಆರೋಪಿಗಳು. ಲೋಕೇಶ್ ಆರೋಪಿ ವಿಶ್ವನ ಅತ್ತಿಗೆಯೊಂದಿಗೆ ಸಂಬಂಧ ಹೊಂದಿದ್ದ, ಇದರಿಂದ ಕೋಪಗೊಂಡ ವಿಶ್ವ ತನ್ನ ಸ್ನೇಹಿತರ ಸಹಾಯದಿಂದ ಲೋಕೇಶ್ ನನ್ನು ಕೊಲೆ ಮಾಡಿ ಆತ್ಮಹತ್ಯೆ ಎಂದು ಸಾಬೀತು ಮಾಡಲು ಶವವನ್ನು ರೈಲ್ವೆ ಹಳಿಗಳ ಮೇಲೆ ಎಸೆದಿದ್ದಾರೆ.

ಆದರೆ ಶವ ಪರೀಕ್ಷೆಯ ವೇಳೆ ಇದು ಕೊಲೆ ಎಂಬುದನ್ನು ತಿಳಿದ ಪೊಲೀಸರು ತನಿಖೆ ನಡೆಸಿದಾಗ ಆರೋಪಿಗಳು ಸಿಕ್ಕಿಹಾಕಿಕೊಂಡಿದ್ದಾರೆ. ಇದೀಗ ಮೂವರನ್ನು ಪೊಲಿಸರು ಬಂಧಿಸಿದ್ದಾರೆ ಎಂಬುದಾಗಿ ತಿಳಿದುಂದಿದೆ.

  

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ