ಹತ್ಯೆಯ ದಿನ ಸಂತೋಷ್, ಆಹಾರದಲ್ಲಿ ನಿದ್ರೆ ಮಾತ್ರೆ ಬೆರೆಸಿ ಪತಿ ಮತ್ತು ಮಕ್ಕಳಿಗೆ ನೀಡಿದ್ದಾಳೆ. ಎಲ್ಲರು ದೀರ್ಘನಿದ್ರೆಗೆ ತಲುಪಿದಾಗ, ಮೂವರು ಸುಪಾರಿ ಕಿಲ್ಲರ್ರನ್ನು ಕರೆಸಿ ಹತ್ಯೆ ಮಾಡಿಸಿದ್ದಾಳೆ.
ಹತ್ಯೆಯ ನಂತರ ಸಂತೋಷ್, ಹಂತಕರಿಗೆ 60 ಸಾವಿರ ರೂಪಾಯಿ ಮತ್ತು ಸ್ಕೂಟಿ ಕೀ ಉಡುಗೊರೆಯಾಗಿ ನೀಡಿದ್ದಾಳೆ. ಸ್ಕೂಟಿಯಲ್ಲಿ ಮೂವರು ಹಂತಕರು ನೇರವಾಗಿ ಹತ್ತಿರದ ರೈಲ್ವೆ ನಿಲ್ದಾಣಕ್ಕೆ ತೆರಳಿ ಅಲ್ಲಿ ಸ್ಕೂಟಿ ಮತ್ತು ಹತ್ಯೆಗೆ ಬಳಸಿದ ಆಯುಧಗಳನ್ನು ಬಿಟ್ಟು ತೆರಳಿದ್ದಾರೆ.
ರೈಲ್ವೆ ನಿಲ್ದಾಣದಲ್ಲಿ ಹಂತಕರು ರೈಲಿಗಾಗಿ ಕಾದಿದ್ದಾರೆ. ಆದರೆ, ರೈಲು ಬಾರದಿದ್ದ ಹಿನ್ನೆಲೆಯಲ್ಲಿ ಮೂವರು ಆರೋಪಿಗಳು ಅಟೋದಲ್ಲಿ ಬೇರೆ ಬೇರೆ ಸ್ಥಳಗಳಿಗೆ ತೆರಳಿದ್ದಾರೆ. ಪೊಲೀಸರು ಮಹಿಳೆ ಸಂತೋಷ್ಗೆ ಬೆತ್ತದ ರುಚಿ ತೋರಿಸಿದ ಕೂಡಲೇ ಹತ್ಯೆಯ ಬಗ್ಗೆ ಬಾಯಿ ಬಿಟ್ಟಿದ್ದಾಳೆ. ಕೂಡಲೇ ಪೊಲೀಸರು ಮೂವರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.