ಹೆಲಿಕಾಫ್ಟರ್‌ ಗೆ ಡಿಕ್ಕಿ ಹೊಡೆದ ಹಕ್ಕಿ: ಯೋಗಿ ಆದಿತ್ಯನಾಥ್‌ ಹೆಲಿಕಾಫ್ಟರ್‌ ತುರ್ತು ಭೂ ಸ್ಪರ್ಶ

ಭಾನುವಾರ, 26 ಜೂನ್ 2022 (14:09 IST)

ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ ಪ್ರಯಾಣಿಸುತ್ತಿದ್ದ ಹೆಲಿಕಾಫ್ಟರ್‌ ಗೆ ಪಕ್ಷಿಯೊಂದು ಡಿಕ್ಕಿ ಹೊಡೆದ ಕಾರಣ ತುರ್ತು ಭೂಸ್ಪರ್ಶ ಮಾಡಿದೆ.

ಭಾನುವಾರ ಬೆಳಿಗ್ಗೆ ಈ ಘಟನೆ ನಡೆದಿದ್ದು, ವಾರಣಾಸಿಯಲ್ಲಿ ಯೋಗಿ ಆದಿತ್ಯನಾಥ್‌ ಪ್ರಯಾಣಿಸುತ್ತಿದ್ದ ಹೆಲಿಕಾಫ್ಟರ್‌ ತುರ್ತು ಭೂ ಸ್ಪರ್ಶ ಮಾಡಿದೆ.

ವಾರಣಾಸಿ ಸರ್ಕ್ಯೂಟ್‌ ಹೌಸ್‌ ನಿಂದ ಬೆಳಿಗ್ಗೆ ೮.೫೫ಕ್ಕೆ ಹೊರಟ ಯೋಗಿ ಆದಿತ್ಯನಾಥ್‌ ಲಕ್ನೋಗೆ ಮರಳುವ ಸಂದರ್ಭದಲ್ಲಿ ಈ ಘಟನೆ ನಡೆದಿದ್ದು, ಯಾವುದೇ ಅಪಾಯ ಸಂಭವಿಸಿಲ್ಲ.

ಘಟನೆ ಹಿನ್ನೆಲೆಯಲ್ಲಿ ಯೋಗಿ ಆದಿತ್ಯನಾಥ್‌ ಹೆಲಿಕಾಫ್ಟರ್‌ ತೊರೆದು ವಿಮಾನದಲ್ಲಿ ಪ್ರಯಾಣಿಸಿಲು ನಿರ್ಧರಿಸಿದ್ದು, ವಿಮಾನ ನಿಲ್ದಾಣದತ್ತ ಹೊರಟರು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ