ಪ್ರಿಯತಮೆ ಕ್ಯಾನ್ಸರ್ ನಿಂದ ತೀರಿಕೊಂಡ ಬೇಸರದಲ್ಲಿ ಪ್ರಿಯಕರ ಮಾಡಿದ್ದೇನು ಗೊತ್ತಾ?

ಶನಿವಾರ, 3 ನವೆಂಬರ್ 2018 (08:41 IST)
ಮಹಾರಾಷ್ಟ್ರ: ಪ್ರೀತಿಸಿದ ಹುಡುಗಿ ರಕ್ತದ ಕ್ಯಾನ್ಸರ್ ನಿಂದಾಗಿ ತೀರಿಕೊಂಡ ಬೇಸರದಲ್ಲಿ ಯುವಕನೊಬ್ಬ ಬೆಟ್ಟದಿಂದ ಹಾರಿ ಪ್ರಾಣ ತ್ಯಾಗ ಮಾಡಿದ ಘಟನೆ ಮಹಾರಾಷ್ಟ್ರದಲ್ಲಿ ನಡೆದಿದೆ.

ಪ್ರಸಿದ್ಧ ಪ್ರವಾಸಿ ಸ್ಥಳ ಮಹಾಬಲೇಶ್ವರ್ ನಲ್ಲಿ ಯುವಕ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಮೃತನನ್ನು ವಿಶಾಲ್ ಗಾಯ್ಕರ್ ಎಂದು ಗುರುತಿಸಲಾಗಿದೆ.

ಈತ ಕಾಲೇಜು ವಿದ್ಯಾರ್ಥಿಯಾಗಿದ್ದು, ಇತ್ತೀಚೆಗಷ್ಟೇ ಈತ ಪ್ರೀತಿಸುತ್ತಿದ್ದ ಹುಡುಗಿ ಕ್ಯಾನ್ಸರ್ ನಿಂದಾಗಿ ತೀರಿಕೊಂಡಿದ್ದಳು. ನಂತರ ಆಕೆಯ ಅಂತಿಮ ಕ್ರಿಯೆಯಲ್ಲೂ ಪಾಲ್ಗೊಂಡಿದ್ದ ವಿಶಾಲ್ ಇದೇ ವಿಚಾರವಾಗಿ ಬೇಸರದಲ್ಲಿದ್ದ. ಕೊನೆಗೆ ಮಹಾಬಲೇಶ್ವರ್ ನಲ್ಲಿ 4000 ಅಡಿ ಎತ್ತರದ ಬೆಟ್ಟದಿಂದ ಹಾರಿ ಪ್ರಾಣ ಕಳೆದುಕೊಂಡಿದ್ದಾನೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.     

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ