ಬಿಗ್ ಬಾಸ್ ನಿಂದ ಹೊರಬಂದ ಮೇಲೂ ಕೃಷಿ-ಜಗನ್ ಜತೆ ಸೇರಿ ಗಾಸಿಪ್ ಮಾಡಿದ್ರು!

ಬುಧವಾರ, 17 ಜನವರಿ 2018 (08:15 IST)
ಬೆಂಗಳೂರು: ಬಿಗ್ ಬಾಸ್ ಕನ್ನಡ ಶೋನಿಂದ ಎಲಿಮಿನೇಟ್ ಆದ ಕೃಷಿ ತಾಪಂಡ ಮತ್ತು ಜಗನ್ ಚಂದ್ರಶೇಖರ್ ತಮ್ಮ ಸ್ನೇಹವನ್ನು ಮಾತ್ರ ಹೊರ ಬಂದ ಮೇಲೂ ಬಿಟ್ಟುಕೊಟ್ಟಿಲ್ಲವಂತೆ!
 

ಕೃಷಿಗಿಂತ ಮೊದಲೇ ಎಲಿಮಿನೇಟ್ ಆಗಿದ್ದ ಜಗನ್ ಆಗಲೇ ವಿದೇಶ ಪ್ರವಾಸ ಮುಗಿಸಿಕೊಂಡು ಬಂದಿದ್ದಾರೆ. ಇದೀಗ ಕೃಷಿ ಜತೆ ಬಿಗ್ ಬಾಸ್ ಮನೆಯ ಸ್ನೇಹಿತೆ ಕೃಷಿ ಜತೆ ಮತ್ತೆ ಭೇಟಿಯಾಗುವ ಅವಕಾಶ ಸಿಕ್ಕಾಗ ದಿನಗಳನ್ನು ನೆನೆಸಿಕೊಂಡಿದ್ದಾರಂತೆ.

ಇಬ್ಬರೂ ಪಾರ್ಟಿ ಮೂಡ್ ನಲ್ಲಿರುವ ಫೋಟೋವನ್ನು ಜಗನ್ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಪ್ರಕಟಿಸಿದ್ದಾರೆ. ಈ ಸಂದರ್ಭದಲ್ಲಿ ನಾವಿಬ್ಬರೂ ಬಿಗ್ ಬಾಸ್ ಮನೆಯ  ಗಾಸಿಪ್ ಬಗ್ಗೆ ಮಾತಾಡಿಕೊಂಡ್ವಿ ಎಂದು ಜಗನ್ ಹೇಳಿಕೊಂಡಿದ್ದಾರೆ!

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ