ಬಿಗ್ ಬಾಸ್: ದಿವಾಕರ್ ಹೊರಬಿದ್ದಿರುವುದಕ್ಕೆ ಸುದೀಪ್ ವಿರುದ್ಧ ತಿರುಗಿಬಿದ್ದ ಅಭಿಮಾನಿಗಳು

ಭಾನುವಾರ, 31 ಡಿಸೆಂಬರ್ 2017 (10:14 IST)
ಬೆಂಗಳೂರು: ಕಾಮನ್ ಮ್ಯಾನ್ ಆಗಿ ಬಿಗ್ ಬಾಸ್ ಮನೆ ಪ್ರವೇಶಿಸಿ ಟಾಪ್ ಫೈನಲಿಸ್ಟ್ ಗೆ ಬರಬಹುದು ಎಂದೇ ನಿರೀಕ್ಷಿಸಲಾಗಿದ್ದ ದಿವಾಕರ್ ಈ ವಾರ ಎಲಿಮಿನೇಟ್ ಆಗಿರುವುದಕ್ಕೆ ಅವರ ಅಭಿಮಾನಿಗಳು ಸಿಟ್ಟಾಗಿದ್ದಾರೆ.
 

ಸುದೀಪ್ ಯಾಕೆ ಹೀಗೆ ಮಾಡಿದ್ರಿ? ಬಿಗ್ ಬಾಸ್ ವಿನ್ ಆಗುವ ಅರ್ಹತೆಯಿದ್ದ ದಿವಾಕರ್ ರನ್ನು ಯಾಕೆ ಎಲಿಮಿನೇಟ್ ಮಾಡಿದ್ರಿ? ಇದೆಲ್ಲಾ ಪೂರ್ವ ನಿಯೋಜಿತವಾ ಎಂದು ಸಾಮಾಜಿಕ ಜಾಲತಾಣದಲ್ಲಿ ದಿವಾಕರ್ ಅಭಿಮಾನಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಈ ವಾರ ಇಬ್ಬರು ಸ್ಪರ್ಧಿಗಳು ಮನೆಯಿಂದ ಹೊರಬಿದ್ದಿದ್ದಾರೆ. ದಿವಾಕರ್ ಜತೆಗೆ ಸೀಕ್ರೆಟ್ ರೂಂನಲ್ಲಿದ್ದ ಜಯಶ್ರೀನಿವಾಸನ್ ಕೂಡಾ ಮನೆಯಿಂದ ಎಲಿಮಿನೇಟ್ ಆಗಿದ್ದಾರೆ. ಅಲ್ಲಿಗೆ ಈ ವಾರ ಎರಡು ಬಿಗ್ ವಿಕೆಟ್ ಬಿದ್ದಂತಾಗಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ