ಬಿಗ್ ಬಾಸ್ ಕನ್ನಡ: ಚಿಕನ್ ಆಸೆಗೆ ಬಿದ್ದು ಇದೇನು ಮಾಡಿಕೊಂಡರು ಕೃಷಿ?!

ಮಂಗಳವಾರ, 19 ಡಿಸೆಂಬರ್ 2017 (10:25 IST)
ಬೆಂಗಳೂರು: ನಿಯಮ ಮೀರಿದರೆ ಬಿಗ್ ಬಾಸ್ ಮನೆಯೊಳಗೆ ತಕ್ಕ ಶಿಕ್ಷೆ ಎದುರಿಸಬೇಕಾಗುತ್ತದೆ. ಹಾಗಿದ್ದರೂ ಪದೇ ಪದೇ ಸದಸ್ಯರು ನಿಯಮ ಮೀರಿ ಚಿತ್ರ ವಿಚಿತ್ರ ಶಿಕ್ಷೆಗೊಳಗಾಗುವುದು ಸಹಜ.
 

ಇದೀಗ ಕೃಷಿ ತಾಪಂಡ ಸರದಿ. ಇದೇ ಮೊದಲ ಬಾರಿಗೆ ತಪ್ಪು ಮಾಡಿ ಕೃಷಿ ಸಿಕ್ಕಿ ಹಾಕಿಕೊಂಡಿದ್ದಾರೆ. ಲಕ್ಸುರಿ ಬಜೆಟ್ ಅಂಗವಾಗಿ ಅನುಪಮಾ ಮತ್ತು ಶ್ರುತಿಗೆ ಮನೆಯಿಂದ ತಿಂಡಿ ಬಂದಿತ್ತು. ಅನುಪಮಾ ಮನೆಯಿಂದ ಚಿಕನ್ ಬಿರಿಯಾನಿ ಮಾಡಿ ತಂದಿದ್ದರು.

ಆದರೆ ಸಂಯುಕ್ತಾ ಇದನ್ನು ಸ್ಟೋರ್ ರೂಂನಿಂದ ಹೊರಬರುತ್ತಿದ್ದಂತೆ ಕೃಷಿ ಚೂರು ಮಸಾಲೆ ಟೇಸ್ಟ್ ಮಾಡಿದ್ದಕ್ಕೆ ಬಿಗ್ ಬಾಸ್ ಈ ವಾರದ ಲಕ್ಸುರಿ ಬಜೆಟ್ ನಿಂದ 300 ಪಾಯಿಂಟ್ ಗಳನ್ನು ಕಟ್ ಮಾಡಿ ಶಿಕ್ಷೆ ಕೊಟ್ಟರು. ಲಕ್ಸುರಿ ಬಜೆಟ್ ಕಟ್ ಆಗುತ್ತಿದ್ದಂತೆ ಕೃಷಿ ಮೆಲೆ, ಚಂದನ್ ಸೇರಿದಂತೆ ಮನೆಯ ಸದಸ್ಯರು ಮುಗಿಬಿದ್ದರು.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ