ಮುದ್ದು ಗುಮ್ಮ ಅಂಜಲಿಗೆ ದುಡ್ಡು ಕೊಡದೇ ಮೋಸ ಮಾಡಿದ್ರಾ ಒಗ್ಗರಣೆ ಡಬ್ಬಿ ಮುರಳಿ?

ಶನಿವಾರ, 16 ಡಿಸೆಂಬರ್ 2017 (11:05 IST)
ಬೆಂಗಳೂರು: ಜೀ ಕನ್ನಡದಲ್ಲಿ ಪ್ರಸಾರವಾಗುತ್ತಿದ್ದ ಮುದ್ದು ಗುಮ್ಮ ಅಂಜಲಿ ಧಾರವಾಹಿಯಲ್ಲಿ ಅಂಜಲಿ ಪಾತ್ರಧಾರಿಯಾಗಿದ್ದ ಬಾಲನಟಿ ಶ್ರೀತಾಗೆ ಸಂಭಾವನೆ ಕೊಡದೇ ನಿರ್ಮಾಪಕ, ಒಗ್ಗರಣೆ ಡಬ್ಬಿ ಕಾರ್ಯಕ್ರಮ ಖ್ಯಾತಿಯ ಮುರಳಿ ಮೋಸ ಮಾಡಿದ್ದಾರಾ?
 

ಬಾಲ ನಟಿ ಶ್ರೀತಾ ಅಮ್ಮ ಶಿಲ್ಪಾ ಮಧುಸೂದನ್ ಹೀಗಂತ ತಮ್ಮ ಫೇಸ್ ಬುಕ್ ನಲ್ಲಿ ಆರೋಪ ಮಾಡಿದ್ದಾರೆ.  ಸುಮಾರು 45000 ರೂ. ವರೆಗಿನ ಸಂಭಾವನೆಯನ್ನು ಧಾರವಾಹಿ ನಿರ್ಮಾಪಕ ಮುರಳಿ ನೀಡಿಲ್ಲ ಎಂದು ಶಿಲ್ಪಾ ಫೇಸ್ ಬುಕ್ ನಲ್ಲಿ ಬರೆದುಕೊಂಡಿದ್ದಾರೆ.

ಆದರೆ ಮಹಾದೇವಿ ಧಾರವಾಹಿಯಲ್ಲಿ ನಟಿಸಿರುವುದಕ್ಕೆ ನಿರ್ಮಾಪಕಿ ಶ್ರುತಿ ನಾಯ್ಡು ಪ್ರೀತಿಯಿಂದ ಪತ್ರ ಬರೆದುಕೊಟ್ಟಿರುವುದಲ್ಲದೆ, ಚೆನ್ನಾಗಿ ನಡೆಸಿಕೊಂಡರು ಎಂದು ಶಿಲ್ಪಾ ಸ್ಮರಿಸಿಕೊಂಡಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ