ಬಿಗ್ ಬಾಸ್ ಕನ್ನಡ: ದಿನವಿಡೀ ಅತ್ತ ನಿವೇದಿತಾ!

ಶುಕ್ರವಾರ, 15 ಡಿಸೆಂಬರ್ 2017 (10:22 IST)
ಬೆಂಗಳೂರು: ಬಿಗ್ ಬಾಸ್ ಮನೆಯೊಳಗೆ ಸದಾ ನಗು ನಗುತ್ತಲೇ ಇರುವ ನಿವೇದಿತಾ ಗೌಡ ನಿನ್ನೆ ಯಾಕೋ ದಿನವಿಡೀ ಅಳುವ ಪ್ರಸಂಗ ಎದುರಾಗಿತ್ತು. ತಾವು ಅತ್ತರಲ್ಲದೆ, ಮನೆಯವರನ್ನೂ ಅಳಿಸಿದರು.
 

ಮೊದಲು ಬಾಲ್ ಕುಣಿಕೆಗೆ ಹಾಕುವ ಟಾಸ್ಕ್ ನಲ್ಲಿ ಚಂದನ್ ಗೆ ಬೇಸರ ಮಾಡಿದೆಯೆಂದು ಅತ್ತರೆ, ನಂತರ ಮನೆಯವರ ಲೆಟರ್ ಸುಟ್ಟು ಹಾಕುವ ಟಾಸ್ಕ್ ನಲ್ಲಿ ಜೆಕೆ ಮತ್ತು ಜಗನ್ ನಿವೇದಿತಾ ಅಮ್ಮನ ಪತ್ರ ಸುಟ್ಟು ಹಾಕಿದ್ದಕ್ಕೆ ಬೇಜಾರಾಗಿ ಕಣ್ಣೀರು ಹಾಕಿದರು.

ನೀವು ನಾಮಿನೇಟ್ ಆಗಿರುವುದರಿಂದ ನೀವೇ ಹೆಚ್ಚು ಆಡಿ ಎಂದು ಚಂದನ್ ಗೆ ಹೇಳಿದ್ದಕ್ಕೆ ಬೇಸರ ಮಾಡಿದೆ ಎಂದು ನಿವೇದಿತಾ ಅಳುತ್ತಿರಬೇಕಾದರೆ ಅನುಪಮಾ ಮತ್ತು ಶ್ರುತಿ ಬಂದು ಸಮಾಧಾನಪಡಿಸಿದರು. ಪಕ್ಕದಲ್ಲೇ ಕೂತಿದ್ದ ಚಂದನ್ ಸ್ವಲ್ಪ ಹೊತ್ತಾದ ಮೇಲೆ ಸರಿ ಹೋಗ್ತೀನಿ ಎಂದು ಸಮಾಧಾನಿಸಿದರೂ ನಿವೇದಿತಾ ಅಳು ನಿಂತಿರಲಿಲ್ಲ!

ಅದಾದ ಬಳಿಕ ಅಮ್ಮನ ಲೆಟರ್ ಬಂದಿರುವುದು ನೋಡಿ ನಿವೇದಿತಾ ಸೇರಿದಂತೆ ಎಲ್ಲರೂ ಅತ್ತರು. ಆದರೆ ಒಂದೊಂದೇ ಜೋಡಿಯನ್ನು ಕರೆದು ಅದರಲ್ಲಿ ಇನ್ನೊಬ್ಬರ ಹೆಸರು ತೆಗೆದುಕೊಂಡು ಅವರ ಅಮ್ಮನ ಲೆಟರ್ ಸುಡಬೇಕೆಂದಾಗ ಆಯ್ಕೆ ಮಾಡಿದ ಜೋಡಿಯೂ, ಅವರೂ ಎಲ್ಲರೂ ಅತ್ತರು. ಇದ್ದವರಲ್ಲಿ ಜೆಕೆ ಮಾತ್ರ ಸಮಚಿತ್ತರಾಗಿದ್ದರು. ಜೆಕೆ ನಗುತ್ತಲೇ ಇದ್ದರು. ಆದರೆ ಅವರ ಅಮ್ಮನ ಲೆಟರ್ ಸುಟ್ಟು ಹಾಕಿದ ಸಮೀರ್ ಆಚಾರ್ಯ ಮಾತ್ರ ಅಳು ನಿಲ್ಲಿಸಲೇ ಇಲ್ಲ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ