‘ರಾಮಾಯಣ’ದಲ್ಲಿ ತ್ರಿಜಟಾ ಎಂಬ ರಾಕ್ಷಸಿ ಪಾತ್ರ ಮಾಡಿದ್ದವರು ಯಾರು ಗೊತ್ತೇ?!

ಭಾನುವಾರ, 19 ಏಪ್ರಿಲ್ 2020 (09:07 IST)
ಮುಂಬೈ: ದೂರದರ್ಶನದಲ್ಲಿ ಮರಳಿ ಪ್ರಸಾರವಾಗುತ್ತಿರುವ ರಾಮಾಯಣ ಧಾರವಾಹಿ ಜನಪ್ರಿಯತೆಯ ಉತ್ತುಂಗದಲ್ಲಿದೆ. ಈ ಧಾರವಾಹಿಯ ಪಾತ್ರಧಾರಿಗಳ ಬಗ್ಗೆ ಈಗ ಒಂದೊಂದೇ ಇಂಟರೆಸ್ಟಿಂಗ್ ವಿಚಾರಗಳು ಹೊರಬರುತ್ತಿವೆ.


ಸೀತೆ ಅಶೋಕ ವನದಲ್ಲಿ ಬಂಧಿಯಾಗಿ ಕುಳಿತಿರುವಾಗ ಆಕೆಯ ನೆರವಿಗೆ ಬರುವುದು ತ್ರಿಜಟಾ ಎಂಬ ರಾಕ್ಷಸಿ. ಮೂಲತಃ ರಾಕ್ಷಸಿಯಾದರೂ ಈಕೆ ಒಳ್ಳೆಯ ಮನಸ್ಸಿನವಳು. ಸೀತೆಯ ದುಃಖಕ್ಕೆ ಸಾಂತ್ವನ ಹೇಳುತ್ತಿರುತ್ತಾಳೆ.

ಅಸಲಿಗೆ ಈ ಪಾತ್ರ ಮಾಡಿದವರು ಯಾರು ಗೊತ್ತಾ? ಬಾಲಿವುಡ್ ನಟ ಆಯುಷ್ಮಾನ್ ಖುರಾನಾ ಅತ್ತೆ ಅನಿತಾ ಕಶ್ಯಪ್. ಅನಿತಾ ಕಶ್ಯಪ್ ಮಗಳು ತಾಹಿರಾ ಕಶ್ಯಪ್ ವಿವಾಹವಾಗಿದ್ದು, ಆಯುಷ್ಮಾನ್ ರನ್ನು. ಇದೀಗ ಇವರ ವಿಚಾರವೂ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ