ಅಮೃತವರ್ಷಿಣಿ ಮತ್ತು ಅವನು ಮತ್ತೆ ಶ್ರಾವಣಿ “ಮಹಾ ಸಂಚಿಕೆ”

ಮಂಗಳವಾರ, 17 ಜನವರಿ 2017 (11:50 IST)
ಸ್ಟಾರ್ ಸುವರ್ಣವಾಹಿನಿಯ ಹೆಮ್ಮೆಯ ಧಾರಾವಾಹಿಗಳೆಂದೇ ಪ್ರಸಿದ್ಧಿಯಾದ ‘ಅಮೃತವರ್ಷಿಣಿ’ಮತ್ತು ‘ಅವನು ಮತ್ತೆ ಶ್ರಾವಣಿ’ ಧಾರಾವಾಹಿಗಳು ಕರುನಾಡ ವೀಕ್ಷಕರ ಪ್ರೀತಿಗೆ ಪಾತ್ರವಾಗಿವೆ. ಸಾವಿರಾರು ಕಂತುಗಳನ್ನು ಪೂರ್ಣಗೊಳಿಸಿ ಜನಮನ ಗೆದ್ದ ಯಶಸ್ವಿಯ ಧಾರಾವಾಹಿಗಳು. ಈ ಹಿನ್ನಲೆಯಲ್ಲಿ ಸ್ಟಾರ್ ಸುವರ್ಣ ಇವೆರಡನ್ನು ಕೂಡಿಸಿಕೊಂಡು “ಮಹಾಸಂಚಿಕೆ”ಯನ್ನು ಮಾಡಲು ನಿರ್ಧರಿಸಿದೆ. 
 
ಜನವರಿ 16ರಿಂದ ಈ ಸಂಚಿಕೆಗಳು ಪ್ರಾರಂಭವಾಗುತ್ತವೆ. ಈಗಾಗಲೇ ಈ ಎರಡು ಧಾರವಾಹಿಗಳ ನಾಯಕಿಯರು ಅತ್ಯಂತ ಕಷ್ಟ ಹಾಗು ಗೊಂದಲದಲ್ಲಿ ಸಿಲುಕಿಕೊಂಡಿದ್ದಾರೆ. ಹೀಗಾಗಿ ಈ ಎರಡು ಕುಟುಂಬದವರು ಪುಣ್ಯಕ್ಷೇತ್ರಕ್ಕೆ ಒಟ್ಟಿಗೆ ಹೋಗುವುದು ಅಲ್ಲಿ ಇವರುಗಳ ನಡುವೆ ಇರುವ ಆಂತರಿಕ ಸಮಸ್ಯೆಗಳನ್ನು ಹಂಚಿಕೊಂಡು ಪರಿಹಾರಕ್ಕಾಗಿ ಸಾಕಷ್ಟು ಪ್ರಯತ್ನವನ್ನು 
ಪಡುತ್ತಾರೆ. 
 
ಈ ಪಯಣದಲ್ಲಿ ಎರಡು ಧಾರಾವಾಹಿಗಳ ಕುಟುಂಬದ ಸದಸ್ಯರುಗಳೂ ಕೂಡಾ ಭಾಗವಹಿಸುತ್ತಾರೆ. ಈ ಪಯಣದಲ್ಲಿ ಸಾಕಷ್ಟು ಕುತೂಹಲಕಾರಿ ಘಟನೆಗಳು,ಒಂದಿಷ್ಟು ಮುಚ್ಚಿಟ್ಟ 
ಸಂಗತಿಗಳನ್ನು ಇಲ್ಲಿ ಚಿತ್ರಿಸಲಾಗುವುದು. 
 
ಇಂಥಹ “ಮಹಾಸಂಚಿಕೆ”ಗೆ ಪ್ರಣಯರಾಜಾ “ಶ್ರೀನಾಥ್”ಮತ್ತು “ಪದ್ಮಾವಾಸಂತಿ”ಸಾತ್ ನೀಡುತ್ತಿದ್ದಾರೆ. ಈ ಸೆಲಬ್ರಿಟಿಗಳ ಆಗಮನದಿಂದ ಇವೆರಡು ಧಾರಾವಾಹಿಗಳ ಸಮಸ್ಯೆಗೆ ಪರಿಹಾರ ಸಿಗುತ್ತದೆ ಎಂಬುದು ಕುತೂಹಲಕಾರಿಯಾಗಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.

ವೆಬ್ದುನಿಯಾವನ್ನು ಓದಿ