ಲಾಕ್ ಡೌನ್ ಪ್ರಭಾವಕ್ಕೆ ಕತೆ ಮುಗಿಸುತ್ತಿರುವ ಜನಪ್ರಿಯ ಧಾರವಾಹಿ

ಬುಧವಾರ, 15 ಜುಲೈ 2020 (08:49 IST)
ಬೆಂಗಳೂರು: ಲಾಕ್ ಡೌನ್ ನಿಂದಾಗಿ ರೇಟಿಂಗ್ ಕಡಿಮೆಯಾಗಿರುವ ಕಾರಣಕ್ಕೆ ಉದಯ ವಾಹಿನಿಯ ಜನಪ್ರಿಯ ಫ್ಯಾಂಟಸಿ ಧಾರವಾಹಿ ‘ನಂದಿನಿ’ ಕತೆ ಮುಗಿಸುತ್ತಿದೆ.


ಈ ತಿಂಗಳು ಮಾತ್ರ ಧಾರವಾಹಿ ಪ್ರಸಾರವಾಗಲಿದೆ. ನಟ, ನಿರ್ದೇಶಕ ರಮೇಶ್ ಅರವಿಂದ್ ನಿರ್ಮಾಣದಲ್ಲಿ ಮೂಡಿಬರುತ್ತಿರುವ ನಂದಿನಿ ಧಾರವಾಹಿ ಉದಯ ವಾಹಿನಿಯ ನಂ. ಧಾರವಾಹಿ ಆಗಿತ್ತು.  ಆದರೆ ಇದೀಗ ಲಾಕ್ ಡೌನ್ ಬಳಿಕ ಧಾರವಾಹಿ ಪ್ರಾರಂಭವಾದಾಗ ರೇಟಿಂಗ್ ಗಣನೀಯವಾಗಿ ಇಳಿಮುಖವಾಗಿತ್ತು.

ಇದೇ ಕಾರಣಕ್ಕೆ ನಂದಿನಿ ಧಾರವಾಹಿ ತಂಡ ಪ್ರಸಾರ ನಿಲ್ಲಿಸಲು ನಿರ್ಧರಿಸಿದೆ. ಜುಲೈ 31 ರಂದು ಕೊನೆಯ ಸಂಚಿಕೆ ಪ್ರಸಾರವಾಗಲಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ