ಸಿನಿಮಾ ಹೀರೋ ಆಗಬೇಕೆಂದಿದ್ದ ನಿನಗಾಗಿ ಹೀರೋ: ದುಡ್ಡಿಗಾಗಿ ರೋಡ್ ಬದಿ ಚಹಾ ಮಾರಿದ್ದ ರಿತ್ವಿಕ್

Krishnaveni K

ಸೋಮವಾರ, 3 ಜೂನ್ 2024 (12:17 IST)
Photo Credit: Instagram
ಬೆಂಗಳೂರು: ಕಲರ್ಸ್ ಕನ್ನಡ ವಾಹಿನಿಯಲ್ಲಿ ಇದೀಗಷ್ಟೇ ಆರಂಭವಾಗಿರುವ ನಿನಗಾಗಿ ಸೀರಿಯಲ್ ನಟ ರಿತ್ವಿಕ್ ಮಠದ್ ಈಗಾಗಲೇ ಕನ್ನಡ ಕಿರುತೆರೆ ಪ್ರೇಕ್ಷಕರ ಮನಗೆದ್ದಿದ್ದಾರೆ. ಅವರ ಬಗ್ಗೆ ಒಂದಿಷ್ಟು ಇಂಟ್ರೆಸ್ಟಿಂಗ್ ವಿಚಾರಗಳು ಇಲ್ಲಿವೆ.

ಈ ಮೊದಲು ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಅನುರೂಪ ಧಾರವಾಹಿಯಲ್ಲಿ ರಿತ್ವಿಕ್ ಎರಡನೇ ಹೀರೋ ಪಾತ್ರ ಮಾಡಿ ಗಮನ ಸೆಳೆದಿದ್ದರು. ಬಳಿಕ ಕಲರ್ಸ್ ವಾಹಿನಿಯಲ್ಲಿ ಗಿಣಿರಾಮ ಧಾರವಾಹಿಯಲ್ಲಿ ಖಡಕ್ ನಾಯಕನ ಪಾತ್ರ ಮಾಡಿದ್ದರು.

ಈ ಧಾರವಾಹಿ ಬಳಿಕ ರಿತ್ವಿಕ್ ಜನಪ್ರಿಯತೆ ಹೆಚ್ಚಿತ್ತು. ಈ ಧಾರವಾಹಿ ಮುಗಿದ ಬಳಿಕ ಅವರು ಸಿನಿಮಾದಲ್ಲಿ ಅವಕಾಶ ಅರಸಿ ಹೋಗಿದ್ದರು. ಕೆಲವು ದಿನ ಕಿರುತೆರೆಗೆ ಬ್ರೇಕ್ ಕೊಟ್ಟು ಇನ್ಮುಂದೆ ಏನಿದ್ದರೂ ಹಿರಿಪರದೆಗೆ ಶಿಫ್ಟ್ ಆಗುವುದಾಗಿ ರಿತ್ವಿಕ್ ನಿರ್ಧರಿಸಿದ್ದರು.

ಆದರೆ ಯಾಕೋ ಅವರಿಗೆ ಸಿನಿಮಾದಲ್ಲಿ ಅಂತಹ ಅವಕಾಶ ಸಿಗಲಿಲ್ಲ. ಸಿನಿಮಾವನ್ನೇ ಕಾದು ಕುಳಿತಿದ್ದ ಅವರಿಗೆ ಭ್ರಮನಿರಸವಾಗಿತ್ತು. ಹೀಗಾಗಿ ಮತ್ತೆ ಕಿರುತೆರೆಗೆ ಮರಳಲು ನಿರ್ಧರಿಸಿದ್ದರು. ಈ ವೇಳೆಗೆ ಅವರಿಗೆ ಸಿಕ್ಕಿದ್ದೇ ನಿನಗಾಗಿ ಧಾರವಾಹಿ.

ನಿಜ ಜೀವನದಲ್ಲಿ ಅವರಿಗೆ ಮದುವೆಯಾಗಿದ್ದು, ಮುದ್ದಾದ ಮಡದಿಯಿದ್ದಾಳೆ. ಆದರೆ ಇನ್ನೂ ಮಕ್ಕಳಾಗಿಲ್ಲ. ಆದರೆ ಸೀರಿಯಲ್ ನಲ್ಲಿ ಈಗ ಒಂದು ಪುಟಾಣಿ ಮಗುವಿನ ತಂದೆಯ ಪಾತ್ರದಿಂದ ಎಲ್ಲರ ಗಮನ ಸೆಳೆಯುತ್ತಿದ್ದಾರೆ.

ಆರಂಭದ ದಿನಗಳಲ್ಲಿ ಜೀವನೋಪಾಯಕ್ಕಾಗಿ ಅವರು ಸಾಕಷ್ಟು ಕಷ್ಟಪಟ್ಟಿದ್ದರಂತೆ. ರಸ್ತೆ ಬದಿಯಲ್ಲಿ ಚಹಾ ಮಾರಿ ಜೀವನ ಮಾಡಿದ್ದು ಇದೆ. ಆದರೆ ಇದನ್ನು ಮನೆಯವರ ಬಳಿ ಹೇಳಿಕೊಂಡಿರಲಿಲ್ಲ ಎಂದು ರಿತ್ವಿಕ್ ಕಾರ್ಯಕ್ರಮವೊಂದರಲ್ಲಿ ಹೇಳಿದ್ದರು. ಈಗ ಕಿರುತೆರೆಯಲ್ಲಿ ಎಲ್ಲರ ಮನಗೆಲ್ಲುತ್ತಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ