ವಿವಾದ ತಣ್ಣಗಾದ ಬಳಿಕ ಮತ್ತೆ ಡಬ್ಬಿಂಗ್ ಧಾರವಾಹಿ ಪ್ರಸಾರ ಮಾಡಲಿರುವ ಕನ್ನಡ ವಾಹಿನಿ

ಮಂಗಳವಾರ, 5 ಮೇ 2020 (09:40 IST)
ಬೆಂಗಳೂರು: ಲಾಕ್ ಡೌನ್ ಜಾರಿಯಾಗುತ್ತಿದ್ದಂತೇ ಧಾರವಾಹಿಗಳ ಶೂಟಿಂಗ್ ಇಲ್ಲದ ಕಾರಣ ಸ್ಟಾರ್ ಸುವರ್ಣ ವಾಹಿನಿ ಹೊಸ ಎಪಿಸೋಡ್ ಪ್ರಸಾರ ಮಾಡಲಾಗದೇ ಹಿಂದಿಯ ‘ಮಹಾಭಾರತ’ ಧಾರವಾಹಿಯನ್ನು ಕನ್ನಡಕ್ಕೆ ಡಬ್ ಮಾಡಲು ನಿರ್ಧರಿಸಿತ್ತು.


ಈ ಧಾರವಾಹಿಯನ್ನು ಪ್ರಸಾರ ಮಾಡುವುದಾಗಿ ದಿನಾಂಕ ಕೂಡಾ ಘೋಷಿಸಿತ್ತು. ಆದರೆ ಧಾರವಾಹಿಗೆ ಡಬ್ಬಿಂಗ್ ಮಾಡಲು ಹೊರಟ ಕಲಾವಿದರಿಗೆ ಬೆದರಕೆ ಕರೆ ಬಂದ ಹಿನ್ನಲೆಯಲ್ಲಿ ಧಾರವಾಹಿ ಪ್ರಸಾರ ಮಾಡದೇ ಇರಲು ನಿರ್ಧರಿಸಿತ್ತು.

ಆದರೆ ಇದೀಗ ವಿವಾದ ತಣ್ಣಗಾದ ಬಳಿಕ ಮತ್ತೆ ‘ಮಹಾಭಾರತ’ ಡಬ್ಬಿಂಗ್ ಅವತರಣಿಕೆ ಪ್ರಸಾರ ಮಾಡಲು ನಿರ್ಧರಿಸಿದೆ. ಈಗಾಗಲೇ ಉದಯ ವಾಹಿನಿ ಹಲವು ತಮಿಳು ಸಿನಿಮಾಗಳನ್ನು ಕನ್ನಡಕ್ಕೆ ಡಬ್ಬಿಂಗ್ ಮಾಡಿ ಭರ್ಜರಿ ವ್ಯೂ ಪಡೆದುಕೊಂಡಿದೆ. ಇದೀಗ ಸುವರ್ಣ ವಾಹಿನಿಯೂ ಡಬ್ಬಿಂಗ್ ಧಾರವಾಹಿ ಪ್ರಸಾರ ಮಾಡಲು ಹೊರಟಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ