ಕಚ್ಚಾಡುತ್ತಿದ್ದ ಅಭಿಮಾನಿಗಳನ್ನು ಒಂದು ಮಾಡಲು ವಾಹಿನಿಯೇ ಮಾಡಿದೆ ತಂತ್ರ

ಗುರುವಾರ, 13 ಆಗಸ್ಟ್ 2020 (12:54 IST)
ಬೆಂಗಳೂರು: ಜೀ ಕನ್ನಡದಲ್ಲಿ ಪ್ರಸಾರವಾಗುವ ಗಟ್ಟಿಮೇಳ ಮತ್ತು ಜೊತೆ ಜೊತೆಯಲಿ ಧಾರವಾಹಿಗಳ ನಡುವೆ ಟಿಆರ್ ಪಿ ವಿಚಾರದಲ್ಲಿ ಪೈಪೋಟಿ ನಡೆಯುತ್ತಲೇ ಇರುತ್ತದೆ. ಇವೆರಡೂ ಧಾರವಾಹಿಗಳ ಅಭಿಮಾನಿಗಳಂತೂ ಸಾಮಾಜಿಕ ಜಾಲತಾಣದಲ್ಲಿ ಕಚ್ಚಾಡುತ್ತಲೇ ಇರುತ್ತಾರೆ. ಇದೀಗ ಎರಡೂ ಧಾರವಾಹಿಗಳ ಅಭಿಮಾನಿಗಳನ್ನು ಒಂದು ಮಾಡಲು ವಾಹಿನಿ ತಂತ್ರ ಹೆಣೆದಿದೆ.


ನಮ್ಮ ಧಾರವಾಹಿಯೇ ಮೇಲು ಎಂದು ಪರಸ್ಪರ ಕಚ್ಚಾಟ ನಡೆಸುವ ಅಭಿಮಾನಿಗಳನ್ನು ಒಂದು ಮಾಡಲು ಜೀ ಕನ್ನಡ ವಾಹಿನಿ ಮುಂದಿನ ವಾರ ಎರಡೂ ಧಾರವಾಹಿಗಳ ಕಲಾವಿದರನ್ನು ಒಗ್ಗೂಡಿಸುತ್ತಿದೆ. ಅಂದರೆ ಗಟ್ಟಿಮೇಳ ಧಾರವಾಹಿಯ ಪಾತ್ರಧಾರಿಗಳು ಜೊತೆ ಜೊತೆಯಲಿ ಧಾರವಾಹಿಯಲ್ಲಿ ಕಾಣಿಸಿಕೊಳ್ಳಲಿದ್ದಾರೆ.

ಈ ಮೂಲಕ ಎರಡೂ ಧಾರವಾಹಿಗಳ ಅಭಿಮಾನಿಗಳು ಅನಿವಾರ್ಯವಾಗಿಯಾದರೂ ಒಂದು ವಾರ ಶಾಂತವಾಗಿರಲೇ ಬೇಕು. ಈಗಾಗಲೇ ಜೀ ವಾಹಿನಿ ಇದರ ಬಗ್ಗೆ ಸಮೀಕ್ಷೆ ಕೂಡಾ ನಡೆಸಿದೆ. ಅದರಲ್ಲೂ ಹೆಚ್ಚು ಜನರೂ ಎರಡೂ ಧಾರವಾಹಿಯ ಕಲಾವಿದರನ್ನು ಒಂದೇ ಫ್ರೇಮ್ ನಲ್ಲಿ ನೋಡಲು ಬಯಸುವುದಾಗಿ ಮತ ಹಾಕಿದ್ದಾರೆ. ಹೀಗಾಗಿ ಮುಂದಿನ ವಾರ ವೀಕ್ಷಕರಿಗೆ ಹಬ್ಬವಾಗಿರಲಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ