ಬಿಸಿ ಪಾಟೀಲ್ ಸರ್ಕಾರದ ವಿರುದ್ಧ ಬಂಡಾಯವೆದ್ದಿದ್ದಕ್ಕೆ ಬಿಜೆಪಿ ಟಾಂಗ್

ಸೋಮವಾರ, 8 ಅಕ್ಟೋಬರ್ 2018 (08:46 IST)
ಬೆಂಗಳೂರು: ರಾಜ್ಯದ ಸಮ್ಮಿಶ್ರ ಸರ್ಕಾರದ ಸಂಪುಟ ವಿಸ್ತರಣೆ ತಡ ಮಾಡುತ್ತಿರುವುದಕ್ಕೆ ಕಾಂಗ್ರೆಸ್ ನದ್ದೇ ಶಾಸಕರಾದ ಬಿಸಿ ಪಾಟೀಲ್ ಅಸಮಾಧಾನ ವ್ಯಕ್ತಪಡಿಸಿದ್ದು, ಇದನ್ನು ನೋಡಿ ರಾಜ್ಯ ಬಿಜೆಪಿ ಟಾಂಗ್ ಕೊಟ್ಟಿದೆ.

ಸಂಪುಟ ವಿಸ್ತರಣೆ ತಡ ಮಾಡುತ್ತಿರುವ ಮೂಲಕ ಕರ್ನಾಟಕ ಶಾಸಕರಿಗೆ ಮಾಡಿದ ಅವಮಾನ, ಇದು ಪ್ರಜಾಪ್ರಭುತ್ವವನ್ನು ಕೊಲೆ ಮಾಡಿದಂತೆ ಮತ್ತು ಪಕ್ಷದ ಹೆಸರಿನಲ್ಲಿ ಪ್ರಭುತ್ವ ಮೆರೆದಂತೆ ಎಂದು ಬಿಸಿ ಪಾಟೀಲ್ ಟ್ವೀಟ್ ಮೂಲಕ ಅಸಮಾಧಾನ ಹೊರ ಹಾಕಿದ್ದರು. ಈ ಬಾರಿಯ ಸಂಪುಟ ವಿಸ್ತರಣೆಯಲ್ಲಿ ಬಿಸಿ ಪಾಟೀಲ್ ಕೂಡಾ ಸಚಿವ ಸ್ಥಾನದ ಆಕಾಂಕ್ಷಿಯಾಗಿದ್ದಾರೆ.

ಬಿಸಿ ಪಾಟೀಲರ ಈ ಟ್ವೀಟ್ ನೋಡಿ ರಾಜ್ಯ ಬಿಜೆಪಿ ಟಾಂಗ್ ಕೊಟ್ಟಿದ್ದು, ನೋಡಿ ಕಿಂಗ್ ಪಿನ್ ಗಳು ಕಾಂಗ್ರೆಸ್ ನಲ್ಲೇ ಇದ್ದಾರೆ ಎನ್ನುವುದನ್ನು ಪಾಟೀಲ್ ರ ಟ್ವೀಟ್ ತೋರಿಸಿಕೊಟ್ಟಿದೆ ಎಂದು ಲೇವಡಿ ಮಾಡಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.     

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ