ಸತ್ತ ಅಶ್ವಮೇಧ ಕುದುರೆಯನ್ನು ಪ್ರಧಾನಿ ಬಳಿಗೆ ಅಮಿತ್ ಶಾ ಕೊಂಡೊಯ್ಯಬೇಕಷ್ಟೆ: ಸಿಎಂ ಕುಮಾರಸ್ವಾಮಿ ಟಾಂಗ್

ಗುರುವಾರ, 24 ಮೇ 2018 (09:32 IST)
ಬೆಂಗಳೂರು: ಸಿಎಂ ಆಗಿ ಪದಗ್ರಹಣ ಮಾಡಿದ ಬಳಿಕ ಮೊದಲ ಬಾರಿಗೆ ಪತ್ರಿಕಾಗೋಷ್ಠಿ ನಡೆಸಿದ ಕುಮಾರಸ್ವಾಮಿ ಬಿಜೆಪಿ ನಾಯಕರಿಗೆ ಟಾಂಗ್ ಕೊಟ್ಟಿದ್ದಾರೆ.

ನಾವು ಕರ್ನಾಟಕದಲ್ಲಿ ಕಾಂಗ್ರೆಸ್ ಜತೆ ಸೇರಿಕೊಂಡು ಪ್ರಧಾನಿ ಮೋದಿಯವರ ಸೋಲಿಲ್ಲದೆ ಮೆರೆಯುತ್ತಿದ್ದ ಅಶ್ವಮೇಧ ಕುದುರೆಯನ್ನು ಕಟ್ಟಿ ಹಾಕಲು ಯಶಸ್ವಿಯಾಗಿದ್ದೇವೆ. ಈಗ ಅಮಿತ್ ಶಾ ಸತ್ತ ಕುದುರೆಯನ್ನು ಪ್ರಧಾನಿ ಬಳಿಗೆ ಒಯ್ಯಬೇಕಷ್ಟೇ ಎಂದು ಸಿಎಂ ಕುಮಾರಸ್ವಾಮಿ ಲೇವಡಿ ಮಾಡಿದ್ದಾರೆ.

ಉತ್ತರ ಪ್ರದೇಶ ಚುನಾವಣೆ ನಂತರ ನಾನು ಪ್ರಧಾನಿ ಮೋದಿ ಅಶ್ವಮೇಧ ಕುದುರೆಯನ್ನು ಕರ್ನಾಟಕದಲ್ಲಿ ಕಟ್ಟಿ ಹಾಕುತ್ತೇನೆ ಎಂದಿದ್ದೆ. ಇಂದು ಅದನ್ನು ಕಾಂಗ್ರೆಸ್ ಜತೆ ಸೇರಿಕೊಂಡು ಮಾಡಿದ್ದೇವೆ ಎಂದು ಕುಮಾರಸ್ವಾಮಿ ಹೇಳಿಕೊಂಡಿದ್ದಾರೆ.  ಇದೇ ವೇಳೆ ದೇಶದ ಹಿತದೃಷ್ಟಿಯಿಂದ ಕಾಂಗ್ರೆಸ್ ಜತೆ ಸೇರುವ ನಿರ್ಧಾರಕ್ಕೆ ಬಂದೆವು ಎಂದು ಅವರು ಸ್ಪಷ್ಟನೆ ನೀಡಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ