ನನಗೆ ಚಿಕ್ಕಪೇಟೆ ಟಿಕೆಟ್ ತಪ್ಪಲು ಅನಂತಕುಮಾರ್ ಕಾರಣ - ಎನ್.ಆರ್.ರಮೇಶ್ ಆರೋಪ

ಸೋಮವಾರ, 9 ಏಪ್ರಿಲ್ 2018 (14:55 IST)
ಬೆಂಗಳೂರು : ನನಗೆ ಚಿಕ್ಕಪೇಟೆ ಟಿಕೆಟ್ ತಪ್ಪಲು ಅನಂತಕುಮಾರ್ ಕಾರಣ ಎಂದು ಎನ್.ಆರ್.ರಮೇಶ್ ಅವರು ಕೇಂದ್ರ ಸಚಿವ ಅನಂತಕುಮಾರ್ ಅವರ ವಿರುದ್ಧ ಆರೋಪ ಮಾಡಿದ್ದಾರೆ.


‘ಕೇಂದ್ರ ಸಚಿವ ಅನಂತಕುಮಾರ್ ಚಿಕ್ಕಪೇಟೆ ಟಿಕೆಟ್ ತಪ್ಪಿಸಿದ್ರು. ಚಾಮರಾಜಪೇಟೆ ಕ್ಷೇತ್ರದ ಟಿಕೆಟ್ ನೀಡಲು ಮುಂದಾದರು. ನನಗೆ ಚಿಕ್ಕಪೇಟೆ ಟಿಕೆಟ್ ಕೈತಪ್ಪುವುದಕ್ಕೆ ಅವರೇ ಕಾರಣ. ಇದರಿಂದ ನನಗೆ, ನನ್ನ ಬೆಂಬಲಿಗರಿಗೆ ಆಘಾತವಾಗಿದೆ. ಆರ್.ಅಶೋಕ್ ಮನಸ್ಸು ಮಾಡಿದ್ರೆ ನನಗೆ ಟಿಕೆಟ್ ಸಿಗ್ತಿತ್ತು. ನನಗೆ ಆಗುತ್ತಿರೋ ಅನ್ಯಾಯವನ್ನು ತಡೆಯಬಹುದಿತ್ತು. ಬಿಜೆಪಿ ಮುಖಂಡರಿಗೆ 48 ಗಂಟೆಗಳ ಕಾಲಾವಕಾಶವಿದೆ. ಅಷ್ಟರೊಳಗೆ ಸೂಕ್ತ ನಿರ್ಣಯ ತೆಗೆದುಕೊಳ್ಳುವ ನಂಬಿಕೆ ಇದೆ’ ಎಂದು ಎನ್.ಆರ್.ರಮೇಶ್ ಅವರು ಹೇಳಿದ್ದಾರೆ.   


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ