ರಾಹುಲ್‌ಗಾಂಧಿಯಿಂದ ತುಮಕೂರಿನಲ್ಲಿ ಚುನಾವಣಾ ಪ್ರಚಾರ

ಬುಧವಾರ, 4 ಏಪ್ರಿಲ್ 2018 (15:17 IST)
ಎಐಸಿಸಿ ಅಧ್ಯಕ್ಷ ರಾಹುಲ್‌ಗಾಂಧಿ ಇಂದು ತುಮಕೂರಿನಲ್ಲಿ ಚುನಾವಣಾ ಪ್ರಚಾರ ನಡೆಸಲಿದ್ದಾರೆ. 2 ಗಂಟೆಗೆ ತುಮಕೂರಿಗೆ ಆಗಮಿಸುವ ಅವರು  ಮಧ್ಯಾಹ್ನ  2.30ಕ್ಕೆ ಸಿದ್ದಗಂಗಾ ಮಠಕ್ಕೆ ಭೇಟಿ ನೀಡಲಿದ್ದಾರೆ. ಅಲ್ಲಿ 30 ನಿಮಿಷವಿದ್ದು, ಸಿದ್ದಗಂಗಾ ಶ್ರೀಗಳ ಆಶೀರ್ವಾದ ಪಡೆಯುವರು.
ಅಲ್ಲಿಂದ ಕಾಂಗ್ರೆಸ್ ಕಚೇರಿಗೆ ಭೇಟಿ ನೀಡಿ,  ಟೌನ್ ಹಾಲ್  ಸರ್ಕಲ್ ನಲ್ಲಿ 10 ನಿಮಿಷ ಸಾರ್ವಜನಿಕರನ್ನುದ್ದೇಶಿಸಿ ಮಾತನಾಡುವರು. ಅಲ್ಲಿಂದ  ರಸ್ತೆ ಮೂಲಕ ಕುಣಿಗಲ್ ಗೆ ವಿಶೇಷ ಬಸ್ ನಲ್ಲಿ ಪಯಣ ಮಾಡುವರು,
 
ಮಾರ್ಗಮಧ್ಯದಲ್ಲಿ ಗೂಳೂರು, ನಾಗವಲ್ಲಿ, ಹೆಬ್ಬೂರು ಕುಣಿಗಲ್ನಲ್ಲಿ  ಐದೈದು ನಿಮಿಷ ಬಸ್ ನಿಲ್ಲಿಸಿ  ರಾಹುಲ್ ಗಾಂಧಿ ಭಾಷಣ ಮಾಡಲಿದ್ದಾರೆ. ರಾಹುಲ್ ಗಾಂಧಿಗೆ ಸಿ.ಎಂ. ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಜಿ.ಪರಮೇಶ್ವರ್, ಸಚಿವ ಡಿ.ಕೆ ಶಿವಕುಮಾರ್ ಸೇರಿದಂತರ ಹಲವು ಕಾಂಗ್ರೆಸ್ ಮುಖಂಡರ ಸಾತ್ ನೀಡಲಿದ್ದಾರೆ. ತುಮಕೂರು ಜಿಲ್ಲೆಯ ತುಮಕೂರು ನಗರ,  ಗ್ರಾಮಾಂತರ ಹಾಗೂ ಕುಣಿಗಲ್ ವಿಧಾನಸಭಾ ಕ್ಷೇತ್ರದಲ್ಲಿ ರಾಹುಲ್ ಗಾಂಧಿ ಇಂದು ಪ್ರಚಾರ ಮಾಡಲಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ