ರಾಹುಲ್ ಗಾಂಧಿ ಭೇಟಿಗೆ ಕಾದು ನಿಂತಿದ್ದ ಯೋಧನ ಕುಟುಂಬಕ್ಕೆ ಭದ್ರತಾ ಸಿಬ್ಬಂದಿ ಹೇಳಿದ್ದೇನು?!

ಬುಧವಾರ, 4 ಏಪ್ರಿಲ್ 2018 (10:33 IST)
ದಾವಣಗೆರೆ: ಜಿಲ್ಲೆಯಲ್ಲಿ ಜನಾಶೀರ್ವಾದ ಯಾತ್ರೆಯಲ್ಲಿ ಪಾಲ್ಗೊಳ್ಳಲು ಆಗಮಿಸಿರುವ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಭೇಟಿಗೆ ಕಾಂಗ್ರೆಸ್ ನ ಹಲವು ನಾಯಕರು ಅತಿಥಿ ಗೃಹದ ಹೊರಗೆ ಸಾಲು ಗಟ್ಟಿ ನಿಂತಿದ್ದರು. ಅವರ ನಡುವೆ ಓರ್ವ ಯೋಧನ ಕುಟುಂಬವೂ ಸೇರಿತ್ತು.

ಬಾಪೂಜಿ ನಗರದ ಅತಿಥಿ ಗೃಹದಲ್ಲಿ ತಂಗಿರುವ ರಾಹುಲ್ ಗಾಂಧಿ ಕಾಂಗ್ರೆಸ್ ಬ್ಲಾಕ್ ಪಂಚಾಯತ್ ಅಧ್ಯಕ್ಷರೊಂದಿಗೆ ಸಭೆ ನಡೆಸುತ್ತಿದ್ದಾರೆ. ಈ ವೇಳೆ ಅತಿಥಿ ಗೃಹದ ಹೊರಗೆ ಯೋಧನ ಕುಟುಂಬವೊಂದು ರಾಹುಲ್ ಭೇಟಿ ಮಾಡಿ ಅಹವಾಲು ಸಲ್ಲಿಸಲು ಕಾದು ನಿಂತಿತ್ತು.

ಸುಮಾರು ಅರ್ಧ ಗಂಟೆ ಕಾಲ ಯೋಧನ ಕುಟುಂಬ ಕಾದು ನಿಂತಿತ್ತು. ಈ ವೇಳೆ ಭದ್ರತಾ ಸಿಬ್ಬಂದಿಗಳು ಒಳಗೆ ಸಭೆ ನಡೆಯುತ್ತಿರುವುದರಿಂದ ಒಳಗೆ ಬಿಡಲಿಲ್ಲ. ಸಭೆ ಮುಗಿದ ಬಳಿಕ ರಾಹುಲ್ ಭೇಟಿ ಮಾಡಿಸುವುದಾಗಿ ಯೋಧನ ಕುಟುಂಬಕ್ಕೆ ಭದ್ರತಾ ಸಿಬ್ಬಂದಿ ಭರವಸೆ ನೀಡಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ