ರುಂಡದೊಂದಿಗೆ ಕೊಲೆಗಡುಕರು ಪರಾರಿ!

ಮಂಗಳವಾರ, 11 ಸೆಪ್ಟಂಬರ್ 2018 (21:00 IST)
ಕೊಲೆ ಮಾಡಿ ವ್ಯಕ್ತಿಯ ರುಂಡದೊಂದಿಗೆ ಕೊಲೆಗಾರರು ಪರಾರಿಯಾಗಿರುವ ಘಟನೆ ನಡೆದಿದೆ.

ಕಲಬುರಗಿ ತಾಲೂಕಿನ ಆಲಗೂಡ ಗ್ರಾಮದ ಬಳಿ ಭೀಭತ್ಸ ಘಟನೆ ನಡೆದಿದೆ. ಗ್ರಾಮದ ಸಿದ್ದೋಜಿ ಭೋಸಲೆಯನ್ನು ಕೊಲೆಮಾಡಿರುವ ಕೊಲೆಗಡುಕರು ರುಂಡದೊಂದಿಗೆ ಪರಾರಿಯಾಗಿದ್ದಾರೆ.

ಔರಾದ್-ಆಲಗೂಡು ರಸ್ತೆ ಮಾರ್ಗದಲ್ಲಿ ಈ ಕೊಲೆ ನಡೆದಿದೆ. ಕಲಬುರಗಿಯಲ್ಲಿರುವ ಕೆಎಂಎಫ್ ನಲ್ಲಿ ಚಾಲಕನಾಗಿ ಕೊಲೆಯಾಗಿರುವ ಸಿದ್ದೋಜಿ ಕೆಲಸ ಮಾಡುತ್ತಿದ್ದನು.
ಹಣಕಾಸಿನ ವಿಷಯಕ್ಕೆ ಈ ಕೊಲೆ ನಡೆದಿರಬಹುದೆಂದು ಹೇಳಲಾಗುತ್ತಿದೆ. ಕೊಲೆ ಮಾಡಿ ರುಂಡ ಹೊತ್ತೊಯ್ದಿರುವ ಕೊಲೆಗಾರರ ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದಾರೆ.


ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ