ಶಾಸ್ತ್ರಗಳ ಪ್ರಕಾರ ಹಿಂದೂ ಧರ್ಮದಲ್ಲಿ ಈ ಅಗರಬತ್ತಿಯನ್ನು ಹಚ್ಚಬಾರದಂತೆ!

ಬುಧವಾರ, 9 ಅಕ್ಟೋಬರ್ 2019 (09:47 IST)
ಬೆಂಗಳೂರು : ಸನಾತನ ಹಿಂದೂ ಧರ್ಮದ ಪ್ರಕಾರ ದೇವರ ಪೂಜೆಯಲ್ಲಿ ಅಗರಬತ್ತಿಯನ್ನು ಹಚ್ಚಬಾರದು. ಅದರಲ್ಲೂ ಬಿದಿರಿನಿಂದ ಮಾಡಿದ ಅಗರಬತ್ತಿಯನ್ನು ಹಚ್ಚಬಾರದು.




ಇದಕ್ಕೆ ಕಾರಣವೆನೆಂದರೆ ಶಾಸ್ತ್ರಗಳ ಪ್ರಕಾರ ಹಿಂದೂ ಧರ್ಮದಲ್ಲಿ ದೇವರ ಪೂಜೆಗಿರಲಿ, ಸ್ಮಶಾನದಲ್ಲಿಯೂ ಬಿದಿರನ್ನು ಬಳಸುವಂತಿಲ್ಲ. ಸುಡುವಂತಿಲ್ಲ. ಒಂದು ವೇಳೆ ಸುಟ್ಟರೆ ಪಿತೃದೋಷ ನಮಗೆ ಬರುತ್ತದೆ. ಅಲ್ಲದೆ ಬಿದಿರು ಸುಡುವುದು ವಂಶವನ್ನು ಸುಟ್ಟಂತೆ ಎಂದು ಹಿರಿಯರು ಹೇಳಿದ್ದಾರೆ.


ಶಾಸ್ತ್ರಗಳ ಪ್ರಕಾರ ಪೂಜೆಯ ವೇಳೆಯಲ್ಲೂ ಅಗರಬತ್ತಿಯ ಉಲ್ಲೇಖವಿಲ್ಲ. ಎಲ್ಲ ಕಡೆ ಧೂಪವನ್ನು ಹಚ್ಚಬೇಕೆಂದು ಹೇಳಲಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ