ನಿಮ್ಮ ಚಿನ್ನಾಭರಣ ಕಳ್ಳತನವಾದರೆ ಏನರ್ಥ ಗೊತ್ತಾ?

ಗುರುವಾರ, 29 ಆಗಸ್ಟ್ 2019 (10:54 IST)
ಬೆಂಗಳೂರು : ಜ್ಯೋತಿಷ್ಯ ಶಾಸ್ತ್ರದಲ್ಲಿರುವ ಒಂಭತ್ತು ಗ್ರಹಗಳು ನಮ್ಮ ಜೀವನದ ಮೇಲೆ ಪರಿಣಾಮ ಬೀರುತ್ತವೆ. ಜಾತಕದ ಮೂಲಕ ನಮಗೆ ಯಾವ ಗ್ರಹಗಳ ದೋಷವಿದೆ ಎಂಬ ಬಗ್ಗೆ ತಿಳಿಯಬಹುದು.




ನಿಮ್ಮ ಜಾತಕದಲ್ಲಿ ಸೂರ್ಯ ಗ್ರಹ ದೋಷವಿದ್ದರೆ ನಿಮಗೆ ಅಮಂಗಳಕರವಾದದ್ದೆ ನಡೆಯುತ್ತದೆ ಎಂದರ್ಥ. ಸಾಮಾನ್ಯವಾಗಿ ಸೂರ್ಯ ಗ್ರಹ ದೋಷವಿದ್ದವರ ಚಿನ್ನದಿಂದ ಮಾಡಿದ ಉಂಗುರ ಅಥವಾ ಚಿನ್ನಾಭರಣ ಕಳ್ಳತನವಾಗಬಹುದು ಅಥವಾ ಕಳೆದು ಹೋಗಬಹುದು. ಈ ಘಟನೆ ನಡೆದರೆ ಜಾತಕದಲ್ಲಿ ಸೂರ್ಯ ಅಶುಭನಾಗಿದ್ದಾನೆಂದು ಅರ್ಥ.


ಇದಕ್ಕೆ ಪರಿಹಾರವೆನೆಂದರೆ ಬೆಳಿಗ್ಗೆ ಬೇಗ ಎದ್ದು ಸೂರ್ಯನಿಗೆ ಅರ್ಘ್ಯವನ್ನು ಅರ್ಪಿಸಬೇಕು. ಇದರಿಂದ ಸೂರ್ಯ ಗ್ರಹದ ಅಶುಭ ಫಲ ಕಡಿಮೆಯಾಗುತ್ತದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ