ಅಮಾವಾಸ್ಯೆಯಂದು ಹೀಗೆ ಮಾಡಿದರೆ ನರದೃಷ್ಟಿ ದೋಷ ದೂರವಾಗುತ್ತೆ

ಮಂಗಳವಾರ, 18 ಆಗಸ್ಟ್ 2020 (07:40 IST)
ಬೆಂಗಳೂರು : ಇಂದು ಶಕ್ತಿಶಾಲಿ ಅಮವಾಸ್ಯೆ ಇದೆ. ಮಾಟ ಮಂತ್ರ ಸಮಸ್ಯೆ, ನರದೃಷ್ಟಿ ದೋಷದ ಸಮಸ್ಯೆ ಇದ್ದರೆ ಇಂದು ಸಂಜೆ ನಿಂಬೆ ಹಣ್ಣಿನಿಂದ ಹೀಗೆ ಮಾಡಿ.

ಸಂಜೆಯ ವೇಳೆ ದೀಪ ಹಚ್ಚಿ ಪೂಜೆ ಮಾಡಿದ ಬಳಿಕ 5 ಗಂಟೆಯಿಂದ 7.30ರೊಳಗೆ ಹಸಿರು ನಿಂಬೆ ಹಣ್ಣನ್ನು ದೇವರ ಮುಂದೆ ಇಟ್ಟು ಅದಕ್ಕೆ ಪೂಜೆ ಮಾಡಿ ಅದನ್ನು 2 ಭಾಗ ಮಾಡಿ ಒಂದಕ್ಕೆ ಕುಂಕುಮವನ್ನು ಇನ್ನೊಂದಕ್ಕೆ ಅರಶಿನವನ್ನು ಹಚ್ಚಿ ಇವೆರಡನ್ನು ಕಲ್ಲುಪ್ಪು ತುಂಬಿದ ಬಟ್ಟಲಿನಲ್ಲಿ ಇಟ್ಟು ಅದನ್ನು ಮನೆಯ ಹೊರಭಾಗದ ಹೊಸ್ತಿಲಿನಲ್ಲಿ ಇಡಬೇಕು. ಇದನ್ನು ಮರುದಿನ ಬೆಳಿಗ್ಗೆ ತೆಗೆದು ನಿರ್ಜನ ಪ್ರದೇಶದಲ್ಲಿ ಎಸೆದು ಬರಬೇಕು. ಇದರಿಂದ ಮನೆಗೆ ತಗುಲಿದ ನಕರಾತ್ಮಕ ಶಕ್ತಿಗಳು ಓಡಿಹೋಗುತ್ತವೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ