ಜೀವನದಲ್ಲಿ ಸಮಸ್ಯೆ ನಿವಾರಣೆಗೆ ಈ ಸಿಂಪಲ್ ವಾಸ್ತು ಟಿಪ್ಸ್ ಅನುಸರಿಸಿ

Krishnaveni K

ಗುರುವಾರ, 6 ಜೂನ್ 2024 (09:00 IST)
ಬೆಂಗಳೂರು: ಸಮಸ್ಯೆಗಳಿಲ್ಲದ ಜೀವನ ಯಾರದ್ದು ಇಲ್ಲ ಹೇಳಿ. ಜೀವನವೆಂದರೆ ಹಲವು ಸಮಸ್ಯೆಗಳ ಜಂಜಾಟಗಳ ನಡುವಿನ ಪಯಣ. ಆದರೆ ಸಮಸ್ಯೆಗಳೇ ನಿಮ್ಮ ಜೀವನದ ನೆಮ್ಮದಿ ಕಿತ್ತುಕೊಳ್ಳುತ್ತಿದ್ದರೆ ಈ ಒಂದು ಸಿಂಪಲ್ ವಾಸ್ತು ಟಿಪ್ಸ್ ಅನುಸರಿಸಿ.

ಜೀವನದಲ್ಲಿ ಸಾಂಸಾರಿಕವಾಗಿ, ಉದ್ಯೋಗ ಕ್ಷೇತ್ರದಲ್ಲಿ ಸಮಸ್ಯೆಯಾಗುತ್ತಿದ್ದರೆ ವಾಸ್ತು ಪ್ರಕಾರ ಒಂದು ಸರಳ ಕೆಲಸ ಮಾಡಿದರೆ ಸಾಕು. ಪ್ರತಿನಿತ್ಯ ನೀವು ಮಲಗುವ ದಿಂಬಿನ ಕೆಳಗೆ ಒಂದು ತುಂಡು ಚಂದನವನ್ನು ಇಡಿ.

ಇದೇ  ರೀತಿ ಪ್ರತಿನಿತ್ಯವೂ ಮಾಡುತ್ತಿರಬೇಕು. ಇದರಿಂದ ನಿಮ್ಮ ಜೀವನದಲ್ಲಿ ಕಾಡುತ್ತಿರುವ ಸಮಸ್ಯೆ ತಕ್ಕಮಟ್ಟಿಗೆ ಪರಿಹಾರಗವಾಗಲಿದೆ.  ಜೀವನದಲ್ಲಿ ಅತಿಯಾಗಿ ಹಣಕಾಸಿನ ಸಮಸ್ಯೆಯಿಂದ ಬಳಲುತ್ತಿದ್ದರೆ ಮನೆಯ ಬೇರೆ ಬೇರೆ ಮೂಲೆಗಳಲ್ಲಿ ಕರ್ಪೂರವನ್ನು ಇರಿಸಿ.

ಇದಲ್ಲದೆ ಹೋದರೆ ಮನೆಯನ್ನು ಉಪ್ಪು ನೀರಿನಿಂದ ತೊಳೆದುಕೊಂಡು ಶುಚಿಗೊಳಿಸಿದಲ್ಲಿ ಋಣಾತ್ಮಕ ಶಕ್ತಿಗಳು ದೂರವಾಗಿ ಮನೆಯಲ್ಲಿ ಸಮಸ್ಯೆಗಳು ನಿವಾರಣೆಯಾಗುವುದಲ್ಲದೆ, ಧನಾತ್ಮಕ ಶಕ್ತಿ ಮೂಡುವುದು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ