ಈ 5 ಪಕ್ಷಿಗಳು ಮನೆಗೆ ಬಂದರೆ ತಕ್ಷಣ ಓಡಿಸಿ. ಯಾಕೆ ಗೊತ್ತಾ?

ಗುರುವಾರ, 22 ಏಪ್ರಿಲ್ 2021 (06:25 IST)
ಬೆಂಗಳೂರು : ಪಕ್ಷಿಗಳನ್ನು ಕಂಡರೆ ಎಲ್ಲರೂ ಇಷ್ಟಪಡುತ್ತಾರೆ. ಹಾಗೇ ಮನೆಯಲ್ಲಿ ಪಕ್ಷಿಗಳನ್ನು ಸಾಕಲು ಇಷ್ಟಪಡುತ್ತಾರೆ. ಆದರೆ ಕೆಲವೊಂದು ಪಕ್ಷಿಗಳು ಮನೆಯಲ್ಲಿದ್ದರೆ ಶುಭವಾದರೆ ಇನ್ನು ಕೆಲವು ಪಕ್ಷಿಗಳು ಮನೆಗೆ ದಾರಿದ್ರ್ಯವನ್ನು ತರುತ್ತದೆ. ಹಾಗಾಗಿ ಈ 5 ಪಕ್ಷಿಗಳು ಮನೆಗೆ ಬಂದರೆ ತಕ್ಷಣ ಓಡಿಸಿ.

*ಬಾವಲಿ : ಇದು ಮನೆಗೆ ಬಂದರೆ ರೋಗಗಳು, ಸಾವುಗಳ, ವಿನಾಶಗಳು ಕಾಡುತ್ತವೆ. ಮನೆಯ ಕುಟುಂಬದವರ ನಡುವಿನ ಒಗ್ಗಟ್ಟು ಮುರಿದುಹೋಗುತ್ತದೆ.

*ಕಾಗೆ : ಇದ ಮನೆಯ ಬಳಿ ಬಂದರೆ ಒಳ್ಳೆಯದಲ್ಲ. ಹಾಗೇ ಕಾಗೇ ಪದೇ ಪದೇ ಮನೆಯ ಬಳಿ ಬಂದು ಕೂಗಿದರೆ ಸಾವಿನ ಸುದ್ದಿ ಕೇಳುತ್ತೀರಿ ಎಂಬ ನಂಬಿಕೆ ಇದೆ.

*ಕಿಟೋರಿ ಹಕ್ಕಿ: ಈ ಹಕ್ಕಿಗಳು ಯಾವ ಸ್ಥಳದಲ್ಲಿ ಬಂದು ಕುಳಿತುಕೊಳ್ಳುತ್ತದೆಯೋ ಆ ಸ್ಥಳದಲ್ಲಿ ಭೂಕಂಪವಾಗುತ್ತದೆ ಎನ್ನುತ್ತಾರೆ.

*ಪಾರಿವಾಳ : ಈ ಪಕ್ಷಿಗಳಿರುವ ಕಡೆ ಲಕ್ಷ್ಮಿದೇವಿ ನೆಲೆಸುವುದಿಲ್ಲ. ಯಾಕೆಂದರೆ ಇವು ತುಂಬಾ ಗಲೀಜು ಮಾಡುತ್ತವೆ. ಗಲೀಜು ಇರುವ ಕಡೆ ಲಕ್ಷ್ಮಿ ಬರುವುದಿಲ್ಲ.

*ಗೂಬೆ : ಇದು ಮನೆಗೆ ಬರುವುದು ಅಶುಭ ಎಂದು ಹೇಳುತ್ತಾರೆ. ಆದರೆ ಗೂಬೆ ಉತ್ತರ ದಿಕ್ಕಿನಿಂದ ಬಂದು ಕೂಗಿದರೆ ಅದು ಶುಭದ ಸಂಕೇತವೆಂದು ಹೇಳುತ್ತಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ