ಅಮಾವಾಸ್ಯೆಯ ದಿನ ಶಿವನಿಗೆ ಇವುಗಳನ್ನು ಅರ್ಪಿಸಿದರೆ ಆರ್ಥಿಕ ಸಮಸ್ಯೆ ದೂರವಾಗುತ್ತದೆಯಂತೆ

ಮಂಗಳವಾರ, 4 ಡಿಸೆಂಬರ್ 2018 (09:54 IST)
ಬೆಂಗಳೂರು : ತುಂಬಾ ಜನರು ಅಮಾವಾಸ್ಯೆ ಎಂದರೆ ಕೆಟ್ಟ ಶಕುನ ಎಂದು ಭಾವಿಸುತ್ತಾರೆ. ಅಂದು ಯಾವುದೇ ಶುಭಕಾರ್ಯಗಳನ್ನು ಮಾಡಲು ಇಷ್ಟಪಡುವುದಿಲ್ಲ. ಆದರೆ ಅಮಾವಾಸ್ಯೆಯ ದಿನ ಖಚಿತವಾಗಿ ಶಿವನಿಗೆ ಪೂಜೆ ಮಾಡಬೇಕಂತೆ.


ಹೌದು. ಆರ್ಥಿಕ ಸಮಸ್ಯೆಗಳಿಂದ ಸಾಲದ ಬಾಧೆಯನ್ನು ಅನುಭವಿಸುತ್ತಿದ್ದರೆ, ಅಂತವರು ಅಮಾವಾಸ್ಯೆ ದಿನ ಶಿವಲಿಂಗಕ್ಕೆ ಹಸುವಿನ ಹಾಲು, ಕಬ್ಬಿಸ ರಸ ಹಾಗೂ ನೀರಿನಿಂದ ಅಭಿಷೇಕ ಮಾಡಿದರೆ ಆರ್ಥಿಕ ಸಮಸ್ಯೆಗಳೆಲ್ಲಾ ದೂರವಾಗಿ ಅದೃಷ್ಟ ಒಲಿಯುತ್ತದೆಯಂತೆ.


ಒಂದುವೇಳೆ ಮನೆಯಲ್ಲಿ ಶಿವಲಿಂಗವಿಲ್ಲದಿದ್ದರೆ ಶಿವನ ಫೋಟೊ ಮುಂದೆ ಹಾಲು, ಕಬ್ಬಿಸ ರಸ ಹಾಗೂ ಮಾವಿನ ರಸವನ್ನು ನೈವೇದ್ಯ ಮಾಡಿದರೆ ಸಾಕು ಫಲ ದೊರೆಯುತ್ತದೆಯಂತೆ. ಗ್ರಹ ದೋಷವಿದ್ದರೆ ಅಮಾವಾಸ್ಯೆ ದಿನ ಬಿಲ್ವ ಪತ್ರೆಯಿಂದ ಶಿವನನ್ನು ಪೂಜಿಸಿದರೆ ಗ್ರಹದೋಷ ನಿವಾರಣೆಯಾಗುತ್ತದೆಯಂತೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ