ಆಳವಾದ ಧ್ಯಾನಕ್ಕಿಳಿಯಲು ಈ ಮೂರು ತಂತ್ರ ಅನುಸರಿಸಿ

ಗುರುವಾರ, 21 ಫೆಬ್ರವರಿ 2019 (09:17 IST)
ಬೆಂಗಳೂರು: ಪ್ರತಿ ನಿತ್ಯ ಧ್ಯಾನ ಅಥವಾ ಯೋಗ ಮಾಡುವಾಗ ಏಕಾಗ್ರತೆ ಸಿಗುತ್ತಿಲ್ಲ ಎಂಬ ಚಿಂತೆಯೇ? ದೇವರ ಧ್ಯಾನ ಮಾಡುವಾಗ ಆಳವಾದ ಧ್ಯಾನ ಮಾಡಲು ಏನು ಮಾಡಬೇಕು?


ಅದಕ್ಕೆ ಸಿಂಪಲ್ ಆದ ದಾರಿಯೊಂದಿದೆ. ಧ್ಯಾನಕ್ಕೆ ಕುಳಿತಾಗ ಮೂರು ವಿಚಾರಗಳನ್ನು ನೆನಪಿಟ್ಟುಕೊಂಡರೆ ಸಾಕು. ಅವುಗಳೆಂದರೆ ಮುಂದಿನ ಹತ್ತು ನಿಮಿಷಗಳು ಧ್ಯಾನದಲ್ಲಿ ಕುಳಿತಿರುವಾಗ ನನಗೇನೂ ಬೇಡ, ನಾನೇನೂ ಮಾಡಬೇಕಿಲ್ಲ ಮತ್ತು ನಾನು ಏನೂ ಅಲ್ಲ.. ಈ ಮೂರು ಮಂತ್ರಗಳನ್ನು ಮನಸ್ಸಿನಲ್ಲಿ ಧ್ಯಾನಿಸಿಕೊಂಡು ಧ್ಯಾನ ಮಾಡಿ.

ಧ್ಯಾನ ಎನ್ನುವುದು ನಮಗೆ ಶಕ್ತಿ, ಸೃಜನಶೀಲತೆ, ಉತ್ಸಾಹ, ಆನಂದವನ್ನು ನೀಡುತ್ತದೆ. ಹಾಗೆಯೇ ಏಕತೆಯ ಭಾವ ಮೂಡಿಸುತ್ತದೆ. ಇವೆಲ್ಲವನ್ನೂ ಮನಸ್ಸಿನಲ್ಲಿಟ್ಟುಕೊಂಡು ಧ್ಯಾನ ಮಾಡಿ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ