ಪ್ರಭಾಸ್ ಬೇಡವೆಂದು ರಾಣಾಗೆ ಮಣೆ ಹಾಕಿದ ಅನುಷ್ಕಾ ಶೆಟ್ಟಿ

ಮಂಗಳವಾರ, 19 ಫೆಬ್ರವರಿ 2019 (09:15 IST)
ಹೈದರಾಬಾದ್: ಬಾಹುಬಲಿ ಸಿನಿಮಾ ಖ್ಯಾತಿಯ ಪ್ರಭಾಸ್ ಮತ್ತು ಅನುಷ್ಕಾ ಶೆಟ್ಟಿ ಉತ್ತಮ ಸ್ನೇಹಿತರು ಮತ್ತು ಇಬ್ಬರ ನಡುವೆ ಪ್ರೀತಿಯಿದೆ ಎಂದೆಲ್ಲಾ ರೂಮರ್ ಗಳಿವೆ. ಆದರೆ ಇದೀಗ ಅನುಷ್ಕಾ ಪ್ರಭಾಸ್ ರನ್ನು ಬಿಟ್ಟು ರಾಣಾ ದಗ್ಗುಬತ್ತಿಗೆ ಮಣೆ ಹಾಕಿದ್ದಾರೆ.


ಪ್ರಭಾಸ್ ತಮ್ಮನ್ನು ಮದುವೆಯಾಗುತ್ತಿಲ್ಲ ಎಂಬ ಬೇಸರಕ್ಕೆ ಅನುಷ್ಕಾ ಹೀಗೆ ಮಾಡಿರಬಹುದೇ ಎಂದೆಲ್ಲಾ ಲೆಕ್ಕಾಚಾರ ಹಾಕಿದರೆ ತಪ್ಪು. ಅನುಷ್ಕಾ ಈಗ ರಾಣಾಗೆ ಓಕೆ ಎಂದಿರುವುದು ತಮ್ಮ ಹೊಸ ಸಿನಿಮಾ ಸೈಲೆನ್ಸ್ ನಲ್ಲಿ ಅಭಿನಯಿಸಲು.

ಸೈಲೆನ್ಸ್ ಸಿನಿಮಾದ ಮುಖ್ಯ ಪಾತ್ರವೊಂದರಲ್ಲಿ ನಟಿಸಲು ಅನುಷ್ಕಾ ರಾಣಾ ಹೆಸರನ್ನು ಶಿಫಾರಸ್ಸು ಮಾಡಿದ್ದಾರಂತೆ. ಅದರಂತೆ ರಾಣಾ ಈ ಸಿನಿಮಾದಲ್ಲಿ ಅನುಷ್ಕಾ ಜತೆಗೆ ಕಾಣಿಸಿಕೊಳ್ಳಲಿದ್ದಾರೆ ಎಂಬ ಸುದ್ದಿ ಬಂದಿದೆ. ಆದರೆ ನಿಜ ಜೀವನದಲ್ಲಿ ಇವರೆಲ್ಲರೂ ಮೊದಲಿನಷ್ಟೇ ಸ್ನೇಹದಿಂದಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ