ಜ್ವರದ ನೆಪ ಹೇಳಿ ವಿಚಾರಣೆ ತಪ್ಪಿಸಿಕೊಂಡ ಆರ್ಯನ್ ಖಾನ್

ಸೋಮವಾರ, 8 ನವೆಂಬರ್ 2021 (10:15 IST)
ಮುಂಬೈ: ಡ್ರಗ್ ಕೇಸ್ ನಲ್ಲಿ ಜೈಲಿನಿಂದ ಜಾಮೀನಿನ ಮೇಲೆ ಬಿಡುಗಡೆಯಾಗಿರುವ ಶಾರುಖ್ ಪುತ್ರ ಆರ್ಯನ್ ಖಾನ್ ಎನ್ ಸಿಬಿ ಜ್ವರದ ಕಾರಣದಿಂದ ಎನ್ ಸಿಬಿ ವಿಚಾರಣೆಗೆ ಗೈರಾಗಿದ್ದಾರೆ.

ಆರ್ಯನ್ ನಿನ್ನೆ ಇತರ ಆರೋಪಿಗಳೊಂದಿಗೆ ಎನ್ ಸಿಬಿ ಮುಂದೆ ವಿಚಾರಣೆಗೆ ಹಾಜರಾಗಬೇಕಿತ್ತು. ಈ ಬಗ್ಗೆ ಎಲ್ಲಾ ಆರೋಪಿಗಳಿಗೂ ಎನ್ ಸಿಬಿ ಸಮನ್ಸ್ ನೀಡಿತ್ತು.

ಆದರೆ ಆರ್ಯನ್ ಜ್ವರದ ಕಾರಣದಿಂದ ನಿನ್ನೆ ವಿಚಾರಣೆಗೆ ಹಾಜರಾಗಿಲ್ಲ. ಮುಂದಿನ ಎರಡು ದಿನಗಳೊಳಗಾಗಿ ವಿಚಾರಣೆಗೆ ಹಾಜರಾಗುವ ಸಾಧ‍್ಯತೆಯಿದೆ. ಆದರೆ ಅವರ ಜೊತೆಗಿದ್ದ ಇತರ ಆರೋಪಿಗಳು ನಿನ್ನೆಯೇ ವಿಚಾರಣೆಗೆ ಹಾಜರಾಗಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ