ಬಾಲಿವುಡ್ ನಟ ಸಲ್ಮಾನ್ ಖಾನ್ ಜಾಮೀನು ಅರ್ಜಿ ವಿಚಾರಣೆ ಮಾಡಿದ ನ್ಯಾ. ರವೀಂದ್ರ ಕುಮಾರ್ ಜೋಷಿ ಅವರ ವರ್ಗಾವಣೆ!

ಶನಿವಾರ, 7 ಏಪ್ರಿಲ್ 2018 (10:22 IST)
ಜೋಧ್ಪುರ : ಕೃಷ್ಣ ಮೃಗಗಳ ಭೇಟಿಯಾಡಿದ ಪ್ರಕರಣದಡಿ ಈಗಾಗಲೇ ಜೈಲು ಶಿಕ್ಷೆ ಅನುಭವಿಸುತ್ತಿರುವ ಬಾಲಿವುಡ್ ನಟ ಸಲ್ಮಾನ್ ಖಾನ್ ಅವರ ಜಾಮೀನು ಅರ್ಜಿ ವಿಚಾರಣೆ ಮಾಡಿದ  ನ್ಯಾ. ರವೀಂದ್ರ ಕುಮಾರ್ ಜೋಷಿ ಅವರನ್ನು  ವರ್ಗಾವಣೆ ಮಾಡಿದ ಕಾರಣ ಸಲ್ಮಾನ್ ಖಾನ್ ಅವರಿಗೆ ಒಂದು ಶಾಕಿಂಗ್ ನ್ಯೂಸ್ ಕಾದಿತ್ತು. ಆದರೆ ಇದೀಗ ವರ್ಗಾವಣೆಗೂ ಮುನ್ನ ಅವರೇ ಬಂದು ತೀರ್ಪನ್ನು ನೀಡುವುದಾಗಿ ತಿಳಿದುಬಂದಿದೆ.


ಜೋಧ್ಪುರ ಸೆಷನ್ಸ್ ಕೋರ್ಟ್ 20 ವರ್ಷಗಳ ಹಿಂದೆ 2 ಕೃಷ್ಣ ಮೃಗಗಳ ಭೇಟಿಯಾಡಿದ್ದಕ್ಕಾಗಿ ನಟ ಸಲ್ಮಾನ್ ಖಾನ್ ಅವರಿಗೆ 5 ವರ್ಷ ಜೈಲು ಶಿಕ್ಷೆ ಹಾಗೂ 10 ಸಾವಿರ ರೂ. ದಂಡ ವಿಧಿಸಿತ್ತು. ಈ ಹಿನ್ನಲೆಯಲ್ಲಿ ಅವರ ಪರ ವಕೀಲರು ಜಾಮೀನು ಕೋರಿ ಅರ್ಜಿ ಸಲ್ಲಿಸಿದ್ದರು. ಈ ಬಗ್ಗೆ ಶುಕ್ರವಾರ ಜೋಧ್ಪುರ ಸೆಷನ್ಸ್ ಕೋರ್ಟ್ ನಲ್ಲಿ ನ್ಯಾ. ರವೀಂದ್ರ ಕುಮಾರ್ ಜೋಷಿ ಅವರು ವಿಚಾರಣೆ ನಡೆಸಿ ತೀರ್ಪನ್ನು ಶನಿವಾರ (ಇಂದು) ನೀಡುವುದಾಗಿ ತಿಳಿಸಿದ್ದರು.


ಆದರೆ ಸಲ್ಮಾನ್ ಖಾನ್ ಜಾಮೀನು ಅರ್ಜಿಯ ವಿಚಾರಣೆ ನಡೆಸಬೇಕಿದ್ದ ನ್ಯಾಯಾಧೀಶರನ್ನು ವರ್ಗಾವಣೆ ಮಾಡಲಾಗಿದೆ. ಈ ಹಿನ್ನಲೆಯಲ್ಲಿ ಸಲ್ಮಾನ್ ಖಾನ್ ಗೆ ಇಂದು ಕೂಡ ಜಾಮೀನು ಸಿಗುವ ಸಾಧ್ಯತೆ ವಿರಳವಾಗಿದೆ ಎಂಬ ಸಂಶಯ ಹಲವರಲ್ಲಿತ್ತು. ಆದರೆ ಇದೀಗ ನ್ಯಾ. ರವೀಂದ್ರ ಕುಮಾರ್ ಜೋಷಿ ಅವರು ವರ್ಗಾವಣೆಗೂ ಮೊದಲ್ಲೆ ತೀರ್ಪನ್ನು ನೀಡುವುದಾಗಿ ತಿಳಿದುಬಂದಿದೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ