ಬಾಲಿವುಡ್ ನಟಿ ಊರ್ವಶಿ ರೌಟೇಲಾ ದ್ರೌಪದಿ ಬಗ್ಗೆ ಹೇಳಿದ ಡೈಲಾಗ್ ಈಗ ಆಪತ್ತು ತಂದಿದೆಯಂತೆ!

ಸೋಮವಾರ, 12 ಮಾರ್ಚ್ 2018 (06:23 IST)
ಮುಂಬೈ : ಬಾಲಿವುಡ್ ನ ‘ಹೇಟ್ ಸ್ಟೋರಿ-4’ ಚಿತ್ರದಲ್ಲಿ ದ್ರೌಪದಿ ಬಗ್ಗೆ ಅವಹೇಳನ ಮಾಡಿದ್ದಾರೆ ಎಂದು ಆರೋಪಿಸಿ ಚಿತ್ರದ ನಾಯಕಿ ಊರ್ವಶಿ ರೌಟೇಲಾ ಅವರಿಗೆ ಬೆದರಿಕೆ ಹಾಕಲಾಗಿದೆ ಎಂಬ ಮಾಹಿತಿ ತಿಳಿದುಬಂದಿದೆ.


ಈ ಚಿತ್ರದ ಕಥೆಯಲ್ಲಿ ನಾಯಕಿ ಇಬ್ಬರು ನಟರ ಜೊತೆ ಸಂಬಂಧ ಬೆಳೆಸುತ್ತಾಳೆ. ಆ ಸಂದರ್ಭದಲ್ಲಿ 'ದ್ರೌಪದಿಗೆ ಐದು ಜನ ಪಾಂಡವರು ಇದ್ದರು. ಇಲ್ಲಿ ಇಬ್ಬರೇ ಇರೋದು' ಎಂಬ ಡೈಲಾಗ್ ಒಂದನ್ನು ಹೇಳಲಾಗಿದೆ. ಇದು ಕೆಲವು ಜನರನ್ನು ಕೆರಳಿಸಿದ್ದ ಕಾರಣ ಅವರು ಆಕ್ರೋಶ ವ್ಯಕ್ತಪಡಿಸಿದ್ದಲ್ಲದೆ ಚಿತ್ರದ ನಾಯಕಿಗೆ ಬೆದರಿಕೆ ಹಾಕಿದ್ದಾರೆ.


ಈ ಬಗ್ಗೆ ಪ್ರತಿಕ್ರಿಯಿಸಿದ ಊರ್ವಶಿ ಅವರು 'ಇದು ಒಂದು ರೀತಿ ದುರಂತ. ಈ ಆರೋಪ ಕೇಳಿ ನನಗೆ ಆಶ್ಚರ್ಯವಾಗುತ್ತಿದೆ. ಸಿನಿಮಾವನ್ನ ಕೇವಲ ಸಿನಿಮಾ ರೀತಿಯಲ್ಲಿ ನೋಡಿ. ಅದು ಯಾವುದೇ ವೈಯಕ್ತಿಕವಲ್ಲ. ಕಥೆಗೆ ಬೇಕಾಗುವಂತಹ ಸಂಭಾಷಣೆ ಬರೆಯಲಾಗುತ್ತೆ. ಇದು ಯಾರನ್ನ ಅವಹೇಳನ ಮಾಡುವ ಉದ್ದೇಶವಲ್ಲ. ದ್ರೌಪದಿ ಇತಿಹಾಸದಲ್ಲಿರುವ ಮಹಾನ್ ಸ್ತ್ರೀ. ಆಕೆ ಬಗ್ಗೆ ನಮಗೆ ಗೌರವವಿದೆ' ಎಂದು ಹೇಳಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ