ಆರ್ಯನ್ ಖಾನ್ ರಕ್ಷಣೆಗೆ ಅಂಗರಕ್ಷಕರ ಕ್ಯೂ!

ಭಾನುವಾರ, 14 ನವೆಂಬರ್ 2021 (09:10 IST)
ಮುಂಬೈ: ಆರ್ಯನ್ ಖಾನ್ ಜೈಲಿನಿಂದ ಹೊರಬಂದ ಮೇಲೆ ಶಾರುಖ್ ದಂಪತಿ ತಮ್ಮ ಪುತ್ರನ ಸುರಕ್ಷತೆಗೆ ಎಲ್ಲಾ ಕ್ರಮ ಕೈಗೊಳ್ಳುತ್ತಿದ್ದಾರೆ.

ಇದೀಗ ಆರ್ಯನ್ ಭದ್ರತೆಗೆಂದೇ ಶಾರುಖ್ ದಂಪತಿ ನಿಷ್ಠಾವಂತರನ್ನು ಹುಡುಕಾಡುತ್ತಿದೆ. ಇದಕ್ಕಾಗಿ ಶಾರುಖ್ ಒಡೆತನದ ರೆಡ್ ಚಿಲ್ಲೀಸ್ ಎಂಟರ್ ಟೈನ್ ಮೆಂಟ್ ಬಾಡಿಗಾರ್ಡ್ ಗಳ ಹುಡುಕಾಟದಲ್ಲಿ ತೊಡಗಿಸಿಕೊಂಡಿದೆ.

ಇದರ ಬೆನ್ನಲ್ಲೇ ಮುಂಬೈನ ಅನೇಕ ಭದ್ರತಾ ಸಂಸ್ಥೆಗಳು ಅಪ್ಲಿಕೇಷನ್ ಹಾಕಿವೆಯಂತೆ. ಆರ್ಯನ್ ಗೆ ನಿಷ್ಠರಾಗಿ ಅವರ ಅಂಗರಕ್ಷಕನಾಗಿ ಕೆಲಸ ಮಾಡಲು ನೂರಾರು ಅರ್ಜಿಗಳು ಬರುತ್ತಿವೆ ಎನ್ನಲಾಗುತ್ತಿದೆ. ಶಾರುಖ್ ದಂಪತಿ ಈಗ ನಿಷ್ಠಾವಂತರನ್ನು ಆಯ್ಕೆ ಮಾಡಲಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ