ಮನಸು ಮಾಡಿದರೆ ನಾನೇ ಮುಖ್ಯಮಂತ್ರಿ; ಕಮಲ್ ಹಾಸನ್

ಗುರುವಾರ, 20 ಜುಲೈ 2017 (08:27 IST)
ಚೆನ್ನೈ: ಇತ್ತೀಚೆಗೆ ಬಿಗ್ ಬಾಸ್ ವಿವಾದ, ಜಿಎಸ್ ಟಿ ಹೀಗೆ ಸಾಕಷ್ಟು ಸುದ್ದಿಯಲ್ಲಿರುವ ನಟ ಕಮಲ್ ಹಾಸನ್ ಈಗ ಇನ್ನೊಂದು ವಿಷಯಕ್ಕೆ ಸುದ್ದಿಯಲ್ಲಿದ್ದಾರೆ. ಅದು ಅವರೇ ಬರೆದಿರುವ ರಾಜಕೀಯ ಕವನದ ಮೂಲಕ.
 
ಅವರೇ ಬರೆದಿರುವ ನಾನ್ ನೆನಚಾ, ನಾನ್ ದಾ ಮೊದಲವರ್ - ನಾನು ಮನಸ್ಸು ಮಾಡಿದರೆ ನಾನೇ ಮುಖ್ಯಮಂತ್ರಿ/ನಾಯಕ ಎಂಬ ಸಾಲುಗಳು ಕಮಲ್ ರಾಜಕೀಯಕ್ಕೆ ಬರುತ್ತಾರೆಯೇ ಎಂಬ ಪ್ರಶ್ನೆ ತಮಿಳುನಾಡಿನಾದ್ಯಂತ ಆರಂಭವಾಗಿದೆ.
 
ಹೀಗೆ ಕವನವನ್ನು ಬರೆದು ಪೋಸ್ಟ್ ಮಾಡಿರುವ ಕಮಲ್ ಮುಂದುವರೆದು,’ ಇಲ್ಲಿ ಯಾರೂ ರಾಜರಲ್ಲ, ವಿಮರ್ಶೆ ಮಾಡೋಣ, ನಾವು ಅವರಂತೆ ರಾಜರಲ್ಲ, ಆದರೂ ಹೊಸ ಕ್ರಾಂತಿ ತರೋಣ. ಹೋರಾಡುವುದಾದರೆ ನಾನೊಬ್ಬ ಸೈನಿಕ. ನಾನು ನಿರ್ಧರಿಸಿದರೆ ನಾನೇ ಮುಖ್ಯಮಂತ್ರಿ. ತಲೆಬಾಗಿದ ತಕ್ಷಣ ನಾನೇನು ಗುಲಾಮನೇ? ಕಿರೀಟವಿಲ್ಲದಿದ್ದರೆ ಎಲ್ಲಾ ಕಳೆದುಕೊಂಡವನೇ? ದಾರಿ ಹುಡುಕುವವರೆಗೆ ದಾರಿ ಕಾಣುವುದಿಲ್ಲ. ಯಾರು ಹೊಸದೊಂದು ಕ್ರಾಂತಿಯನ್ನು ಹುಟ್ಟು ಹಾಕುತ್ತಾರೋ ನನ್ನ ಜತೆ ಬನ್ನಿ’ ಎಂಬ ಅರ್ಥದಲ್ಲಿ ಕರೆ ನೀಡಿದ್ದಾರೆ.
 
ಒಟ್ಟಿನಲ್ಲಿ ಕಮಲ್ ಹಾಸನ್ ಅವರ 11 ಸಾಲುಗಳ ಕವನ ಈಗ ಭಾರೀ ಚರ್ಚೆಗೆ ಕಾರಣವಾಗಿದೆ.
 
 

ವೆಬ್ದುನಿಯಾವನ್ನು ಓದಿ