ಆರ್ಯನ್ ಖಾನ್ ಮತ್ತು ಸ್ನೇಹಿತರ ಡ್ರಗ್ ಜಾಲ ಬೇಧಿಸಿದ ಎನ್ ಸಿಬಿ ಅಧಿಕಾರಿಗೆ ನೆಟ್ಟಿಗರ ಬಹುಪರಾಕ್

ಬುಧವಾರ, 6 ಅಕ್ಟೋಬರ್ 2021 (09:39 IST)
ಮುಂಬೈ: ಐಷಾರಾಮಿ ಹಡಗಿನಲ್ಲಿ ನಡೆಯುತ್ತಿದ್ದ ಡ್ರಗ್ ಪಾರ್ಟಿ ಮೇಲೆ ದಾಳಿ ನಡೆಸಿ ಪ್ರಭಾವಿಗಳನ್ನು ಬಂಧಿಸಿದ ಎನ್ ಸಿಬಿ ಅಧಿಕಾರಿ ಸಮೀರ್ ವಾಂಖೆಡೆ ಹಾಗೂ ತಂಡಕ್ಕೆ ನೆಟ್ಟಿಗರು ಬಹುಪರಾಕ್ ಹಾಕುತ್ತಿದ್ದಾರೆ.


ಸಾಮಾನ್ಯವಾಗಿ ಪ್ರಭಾವಿಗಳು, ಅವರ ಮಕ್ಕಳನ್ನು ಇಂತಹ ಪ್ರಕರಣದಲ್ಲಿ  ರೆಡ್ ಹ್ಯಾಂಡ್ ಆಗಿ ಹಿಡಿದರೆ ಅಂತಹ ಅಧಿಕಾರಿಗಳ ಮೇಲೆ ಸಾಕಷ್ಟು ಒತ್ತಡವಿರುತ್ತದೆ. ಆದರೆ ಇದೆಲ್ಲವನ್ನೂ ಮೆಟ್ಟಿ ನಿಂತು ಡ್ರಗ್ ಜಾಲಕ್ಕೆ ಕೈ ಹಾಕಿರುವ ಸಮೀರ್ ವಾಂಖೆಡೆ ಈಗ ಜನರ ಕಣ್ಣಲ್ಲಿ ಹೀರೋ ಆಗಿದ್ದಾರೆ. ಈ ಏಕೈಕ ವ್ಯಕ್ತಿಯಿಂದ ಇಂದು ಬಾಲಿವುಡ್ ನಡುಗುತ್ತಿದೆ ಎಂದು ಕೆಲವರು ಕಾಮೆಂಟ್ ಮಾಡಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ