ತೈಮೂರು ಫೋಟೋ ತೆಗೆಯುತ್ತಿದ್ದ ಫೋಟೋಗ್ರಾಫರ್ ಗಳ ಮೇಲೆ ಸೈಫ್ ಅಲಿಖಾನ್ ಗೆ ಅಷ್ಟೊಂದು ಸಿಟ್ಟು ಬಂದಿದ್ದೇಕೆ ಗೊತ್ತಾ?

ಭಾನುವಾರ, 14 ಏಪ್ರಿಲ್ 2019 (05:40 IST)
ಮುಂಬೈ: ಸೈಫ್ ಅಲಿ ಖಾನ್ ಮತ್ತು ಕರೀನಾ ಕಪೂರ್ ಪುತ್ರ ತೈಮೂರು ಹುಟ್ಟಿದ ಗಳಿಗೆಯಿಂದಲೇ ಸೆಲೆಬ್ರಿಟಿಯಾಗಿಬಿಟ್ಟಿದ್ದಾನೆ. ಆತ ಎಲ್ಲೇ ಹೋದರೂ, ಏನೇ ಮಾಡಿದರೂ ಕ್ಯಾಮರಾ ಕಣ್ಣುಗಳು ಹಿಂಬಾಲಿಸುತ್ತವೇ ಇರುತ್ತವೆ.


ಇದೀಗ ಮುಂಬೈ ವಿಮಾನ ನಿಲ್ದಾಣದಲ್ಲಿ ತಮ್ಮ ಪುತ್ರ ತೈಮೂರ್ ನನ್ನು ಫ್ಲ್ಯಾಶ್ ಬೆಳಕು ಚೆಲ್ಲಿ ಸಿಕ್ಕಾಪಟ್ಟೆ ಫೋಟೋ ತೆಗೆಯುತ್ತಿದ್ದ ಫೋಟೋಗ್ರಾಫರ್ ಗಳ ಮೇಲೆ ಸೈಫ್ ಸಿಟ್ಟಾದ ಘಟನೆ ನಡೆದಿದೆ.

‘ಸಾಕು ನಿಲ್ಲಿಸಿ. ಹೀಗೇ ಫೋಟೋ ತೆಗೆಯುತ್ತಿದ್ದರೆ ಮಗುವಿನ ಕಣ್ಣು ಹಾಳಾಗುತ್ತದೆ’ ಎಂದು ಸೈಫ್ ಸಿಟ್ಟಿನಿಂದಲೇ ಫೋಟೋಗ್ರಾಫರ್ ಗಳ ಮೇಲೆ ಕೆಂಡ ಕಾರಿದ್ದಾರೆ. ಅಪ್ಪ ಸೈಫ್ ಹೆಗಲ ಮೇಲೆ ತೈಮೂರ್ ಕುಳಿತಿದ್ದ. ಈ ಕ್ಷಣಗಳನ್ನು ಸೆರೆಹಿಡಿಯಲು ಕ್ಯಾಮರಾ ಮೆನ್ ಗಳು ಮುಗಿಬಿದ್ದಿದ್ದರು.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ