ನಟಿ ಖುಷ್ಬೂ ಪತಿ ಮೇಲೆ ಶ್ರೀರೆಡ್ಡಿ ಸಿಡಿಸಿದಳು ಮತ್ತೊಂದು ಬಾಂಬ್!

Webdunia
ಸೋಮವಾರ, 16 ಜುಲೈ 2018 (16:10 IST)
ಹೈದರಾಬಾದ್ : ಕಾಸ್ಟಿಂಗ್ ಕೌಚ್ ಬಗ್ಗೆ ವಿರೋಧ ವ್ಯಕ್ತಪಡಿಸಿ ಟಾಲಿವುಡ್ ನಲ್ಲಿ ಹೊಸ ಸಂಚಲನ ಮೂಡಿಸಿದ ತೆಲುಗು ನಟಿ ಶ್ರೀರೆಡ್ಡಿ ಅವರು ತಮ್ಮನ್ನು ಲೈಂಗಿಕವಾಗಿ ದುರುಪಯೋಗಪಡಿಸಿಕೊಂಡಿರುವ ಹಲವಾರು ಟಾಲಿವುಡ್ ನಟರ ಹೆಸರನ್ನು ಈಗಾಗಲೇ ಬಹಿರಂಗಪಡಿಸಿದ್ದು ಇದೀಗ ಮತ್ತೊಬ್ಬ ತಮಿಳಿನ ನಟ ಹಾಗೂ ನಿರ್ದೇಶಕರೊಬ್ಬರ ವಿರುದ್ಧ ಆರೋಪ ಮಾಡಿದ್ದಾರೆ.




ಅವರು ಬೇರೆ ಯಾರು ಅಲ್ಲ ಬಹುಭಾಷಾ ನಟಿ ಖುಷ್ಬೂ ಅವರ ಪತಿ ಸುಂದರ್ ಸಿ ಅವರು. ಇದೀಗ ನಟಿ ಶ್ರೀರೆಡ್ಡಿ ಅವರು ಸುಂದರ್ ಸಿ ಅವರ ಬಗ್ಗೆ ಸ್ಫೋಟಕ ಮಾಹಿತಿ ಬಿಚ್ಚಿಡುತ್ತೇನೆ ಎಂದು ಕಿಡಿಕಾರಿದ್ದಾರೆ. 'ಅರನ್ ಮನೈ'ಚಿತ್ರದ ಚಿತ್ರೀಕರಣ ವೇಳೆ ನನ್ನನ್ನು ದುರ್ಬಳಕೆ ಮಾಡಿಕೊಳ್ಳುವ ಯತ್ನ ಆಗಿತ್ತು ಎಂದು ಆರೋಪಿಸಿದ್ದಾರೆ.


ಶ್ರೀರೆಡ್ಡಿ ಅವರ ಈ ಆರೋಪದ ಬಗ್ಗೆ  ಪ್ರತಿಕ್ರಿಯಿಸಿರುವ ಸುಂದರ್ ಸಿ ಅವರು ಶ್ರೀರೆಡ್ಡಿ ವಿರುದ್ಧ ಕಾನೂನು ಹೋರಾಟಕ್ಕೆ ಮಾಡುತ್ತೇನೆ ಎಂದಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ಸಂಬಂಧಿಸಿದ ಸುದ್ದಿ

Next Article