ತಮಿಳಿನ ಬಿಗ್ ಬಾಸ್ 2 ಶೋ ನಿರೂಪಣೆಯಲ್ಲಿ ಎಡವಟ್ಟು ಹೇಳಿಕೆ; ಕಮಲ್ ಹಾಸನ್ ವಿರುದ್ಧ ದೂರು ದಾಖಲು

ಶುಕ್ರವಾರ, 3 ಆಗಸ್ಟ್ 2018 (07:18 IST)
ಬೆಂಗಳೂರು : ತಮಿಳು ಕಿರುತೆರೆಯ ರಿಯಾಲಿಟಿ ಶೋ ಬಿಗ್ ಬಾಸ್ 2, ವಿಜಯ್ ಟಿವಿ ಹಾಗೂ ನಟ, ಬಿಗ್ ಬಾಸ್ 2 ಶೋನ ನಿರೂಪಕ ಕಮಲ್ ಹಾಸನ್ ವಿರುದ್ಧ ದೂರು ದಾಖಲಾಗಿದೆ.


ನಟ ಕಮಲ್ ಹಾಸನ್ ಅವರು ತಮಿಳಿನ ಬಿಗ್ ಬಾಸ್ 2  ರಿಯಾಲಿಟಿ ಶೋ ಅನ್ನು ನಿರೂಪಣೆ ಮಾಡುತ್ತಿದ್ದು, ಈ ಹಿಂದೆ ಈ ಶೋ ಅನ್ನು ಮಾಡಬಾರದು ಎಂದು ಅನೇಕರು ವಿರೋಧ ವ್ಯಕ್ತಪಡಿಸಿದ್ದರು. ಆದರೆ ವಿರೋಧಗಳ ನಡುವೆಯು ಈ ಶೋ ಯಶಸ್ವಿಯಾಗಿ ಪ್ರಾರಂಭಗೊಂಡಿತ್ತು. ಆದರೆ ಇತ್ತೀಚೆಗೆ ಈ ಕಾರ್ಯಕ್ರಮವನ್ನು ನಿರೂಪಣೆ ಮಾಡುವಾಗ ನಟ ಕಮಲ್ ಹಾಸನ್ ಅವರು ಹೇಳಿದ ಹೇಳಿಕೆಯೊಂದಕ್ಕೆ ಬಾರಿ ವಿರೋಧ ವ್ಯಕ್ತವಾಗಿದೆ.


ಹೌದು ಕಮಲ್ ಹಾಸನ್ ಅವರು ಬಿಗ್ ಬಾಸ್ ಶೋ ನಲ್ಲಿ ಮಾತನಾಡುವಾಗ “ನಿಮಗೆ ಗೊತ್ತೇ ಇದೆ ಅಲ್ವಾ ತಮಿಳು ನಾಡಿನಲ್ಲಿ ಆಳ್ವಿಕೆ ಮಾಡಿದ ಸರ್ವಾಧಿಕಾರಿಗಳಿಗೆ ಏನಾಗಿತ್ತು ಎಂದು ನೀವೇ ನೋಡಿದ್ದೀರಲ್ವಾ” ಎಂದು ಹೇಳಿದ್ದರು. ಈ ಹೇಳಿಕೆ ಮೂಲಕ ಕಮಲ್ ಹಾಸನ್ ತಮಿಳು ನಾಡಿನ ಮಾಜಿ ಮುಖ್ಯಮಂತ್ರಿ ಜಯಲಲಿತಾ ಅವರನ್ನು ಸರ್ವಾಧಿಕಾರಿಯಾಗಿ ಬಿಂಬಿಸಿದ್ದಾರೆ ಎಂದು ಅವರ ವಿರುದ್ಧ ದೂರು ನೀಡಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ