ಶ್ರೀದೇವಿಗೆ ಉತ್ತಮ ನಟಿ ಪ್ರಶಸ್ತಿ ಲಭಿಸಿರುವುದಕ್ಕೆ ನಿರ್ದೇಶಕ ಶೇಖರ್ ಕಪೂರ್ ಬೇಸರ ವ್ಯಕ್ತಪಡಿಸಿರುವುದಾದರೂ ಯಾಕೆ…?

ಸೋಮವಾರ, 16 ಏಪ್ರಿಲ್ 2018 (06:38 IST)
ಮುಂಬೈ : 2018 ರ 65ನೇ ನ್ಯಾಷನಲ್ ಆವಾರ್ಡ್ ನಲ್ಲಿ ಬಾಲಿವುಡ್ ಸಿನಿಮಾ ‘ಮಾಮ್’ ನಲ್ಲಿ ನಟಿಸಿರುವ ಶ್ರೀದೇವಿ ಅವರಿಗೆ ಉತ್ತಮ ನಟಿ ಪ್ರಶಸ್ತಿ ಲಭಿಸಿರುವುದರ ಬಗ್ಗೆ ಇದೀಗ ನಿರ್ದೇಶಕ ಮತ್ತು ನ್ಯಾಷನಲ್ ಅವಾರ್ಡ್ ಜ್ಯೂರಿ ಹೆಡ್ ಶೇಖರ್ ಕಪೂರ್‍ ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

‘ನಾವೆಲ್ಲರೂ ಶ್ರೀದೇವಿ ಅವರನ್ನು ಭಾವನಾತ್ಮಕವಾಗಿ ಹಚ್ಚಿಕೊಂಡಿದ್ದೇವೆ. ಶ್ರೀದೇವಿ ಮರಣ ಹೊಂದಿದ ಕಾರಣ ಅವರಿಗೆ ಪ್ರಶಸ್ತಿ ನೀಡಿರುವ ತೀರ್ಮಾನ ಸೂಕ್ತವಲ್ಲ. ಈ ನಿರ್ಧಾರದಿಂದ ಇತರ ನಟಿಯರಿಗೆ ಮೋಸವಾಗಿದೆ. ಬೇರೆಯವರು ಸಹ 10-12 ವರ್ಷ ಗಳಿಂದಲೂ ಬಾಲಿವುಡ್‍ನಲ್ಲಿ ಶ್ರಮಿಸುತ್ತಿದ್ದು, ವೃತ್ತಿ ಜೀವನವನ್ನು ಹೊಂದಿದ್ದಾರೆ. ಪ್ರತಿ ಬೆಳಗ್ಗೆ ನಾನು ಉತ್ತಮ ನಟಿಯ ಆಯ್ಕೆಯ ಕಮೀಟಿಗೆ ಬಂದಾಗ ಎಲ್ಲ ಜ್ಯೂರಿಗಳಿಗೆ ಮತ ಚಲಾಯಿಸಲು ಕೇಳುತ್ತಿದೆ. ಆದರೆ ಪದೇ ಪದೇ ಶ್ರೀದೇವಿಗೆ ಹೆಚ್ಚಿನ ಮತಗಳು ಬರುತ್ತಿದ್ದವು. ಆದ್ದರಿಂದ ಆಕೆಗೆ ಕೊಡಬಾರದೆಂದು ಹೋರಾಡಿದವನು ನಾನು’ ಎಂದು ಶೇಖರ್ ಕಪೂರ್ ಅವರು ಹೇಳಿದ್ದಾರೆ.

 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ