ಸಲ್ಮಾನ್ ಖಾನ್ ಗೆ ಜೈಲು ಶಿಕ್ಷೆಯಾಗಿರುವುದರ ಬಗ್ಗೆ ಜಯಾ ಬಚ್ಚನ್ ಹೇಳಿರುವುದೇನು ...?

ಶನಿವಾರ, 7 ಏಪ್ರಿಲ್ 2018 (10:31 IST)
ಮುಂಬೈ : ಕೃಷ್ಣ ಮೃಗಗಳ ಭೇಟೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜೈಲು ಶಿಕ್ಷೆ ಅನುಭವಿಸುತ್ತಿರುವ ನಟ ಸಲ್ಮಾನ್ ಖಾನ್ ಅವರ ಬಗ್ಗೆ  ಇದೀಗ ಬಾಲಿವುಡ್ ಸ್ಟಾರ್ ನಟ ಅಮಿತ್ಆಬ್ ಬಚ್ಚನ್ ಅವರ ಮಡದಿ ನಟಿ, ರಾಜ್ಯಸಭೆ ಸದಸ್ಯೆ ಜಯಾ ಬಚ್ಚನ್ ಅವರು ಬೇಸರ ವ್ಯಕ್ತಪಡಿಸಿದ್ದಾರೆ.


ಕೃಷ್ಣಮೃಗಗಳ ಭೇಟೆಯಾಡಿದ ಕಾರಣ ಸಲ್ಮಾನ್ ಖಾನ್ ಅವರಿಗೆ ಜೋಧ್ ಪುರ ನ್ಯಾಯಾಲಯ 5 ವರ್ಷ ಜೈಲು ಶಿಕ್ಷೆ ಹಾಗೂ 10 ಸಾವಿರ
 
ರೂ. ದಂಡ ವಿಧಿಸಿತ್ತು. ಆದರೆ ಉಳಿದ ಬಾಲಿವುಡ್ ನಟ- ನಟಿಯರನ್ನು ಖುಲಾಸೆಗೊಳಿಸಿತ್ತು. ಈ ಬಗ್ಗೆ ಮಾಧ್ಯಮಗಳ ಜೊತೆ ಮಾತನಾಡಿದ ಜಯಾಬಚ್ಚನ್ ಅವರು ,’ನನಗೆ ಬೇಸರವಾಗಿದೆ ಸಲ್ಮಾನ್ ಗೆ ರಿಲೀಫ್ ನೀಡಬೇಕಾಗಿತ್ತು. ಯಾಕಂದ್ರೆ, ಅವರು ಬಹಳಷ್ಟು ಮಾನವೀಯ ಕೆಲಸ ಮಾಡಿದ್ದಾರೆ’ ಎಂದು ಜೋಧ್ ಪುರ ನ್ಯಾಯಾಲಯದ ತೀರ್ಪಿಗೆ ಬೇಸರ ವ್ಯಕ್ತಪಡಿಸಿದ್ದಾರೆ. ಕೇವಲ ಜಯಾ ಬಚ್ಚನ್ ಮಾತ್ರವಲ್ಲ, ಬಾಲಿವುಡ್ ನ ಹಲವರು ಈ ಬಗ್ಗೆ ಬೇಸರಗೊಂಡಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ