ಬೆಂಗಳೂರು ಸಿಟಿಯ ಬಗ್ಗೆ ಬಹುಭಾಷಾ ತಾರೆ ಸೀರತ್ ಕಪೂರ್ ಹೇಳಿದ್ದೇನು ಗೊತ್ತಾ...?

ಶನಿವಾರ, 13 ಜನವರಿ 2018 (06:24 IST)
ಬೆಂಗಳೂರು : ಟ್ರಾಫಿಕ್, ಧೂಳು, ಕಸದಿಂದ ತುಂಬಿದೆ ಎಂದು ಬೆಂಗಳೂರು ಸಿಟಿಯನ್ನು ಅಲ್ಲಿನ  ವಾಸಿಗಳು ಬೈಯುತ್ತಿದ್ದರೆ, ಬಹುಭಾಷಾ ತಾರೆ ಸೀರತ್ ಕಪೂರ್ ಅವರು ಮಾತ್ರ ಬೆಂಗಳೂರನ್ನು ಚೆಂದದ ನಗರವೆಂದು ಹೊಗಳಿದ್ದಾರೆ.

 
ಸಿನಿಮಾವೊಂದರ ಶೂಟಿಂಗ್ ಗಾಗಿ ಬೆಂಗಳೂರಿಗೆ ಬಂದಿದ್ದ ನಟಿ ಸೀರತ್ ಕಪೂರ್ ಅವರು, ‘ಟ್ರಾಫಿಕ್ ಕಿರಿಕಿರಿ ಇಂತಹ ಮಹಾನಗರದಲ್ಲಿ ಇದ್ದೇ ಇರುತ್ತದೆ. ಆದರೆ ಅದನ್ನು ಬೇರೆ ಸಿಟಿಗೆ ಹೋಲಿಸಿದರೆ ಬೆಂಗಳೂರಲ್ಲಿ ನಿಯಂತ್ರಣದಲ್ಲಿಡಲಾಗಿದೆ. ಬೆಂಗಳೂರು ಚೆಂದದ ಪ್ಲಾನಿಂಗ್ ಮೂಲಕ ಗಮನಸೆಳೆಯೋ ನಗರ. ಇಲ್ಲೇ ಶಾಶ್ವತವಾಗಿ ಉಳಿದು ಬಿಡಬೇಕೆಂಬ ಫೀಲ್ ಹುಟ್ಟಿಸುವವಂಥ ನಗರ. ಇಲ್ಲಿನ ಕನ್ನಡಿಗರು ಕೂಡಾ ಎಲ್ಲರನ್ನೂ ಪ್ರೀತಿಸುತ್ತಾರೆ’ ಎಂದು ಬೆಂಗಳೂರು ಸಿಟಿಯ ಬಗ್ಗೆ ಅಭಿಮಾನದಿಂದ ಮಾತನಾಡಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ