ನಟ ಅಕ್ಷಯ್ ಕುಮಾರ್ ಕೇಂದ್ರ ಸರ್ಕಾರಕ್ಕೆ ಧನ್ಯವಾದ ಸಲ್ಲಿಸಿದ್ದು ಯಾಕೆ ಗೊತ್ತೇ?

ಸೋಮವಾರ, 23 ಜುಲೈ 2018 (11:40 IST)
ಮುಂಬೈ : ಸ್ಯಾನಿಟರಿ ಪ್ಯಾಡ್ ಗಳನ್ನು ಜಿಎಸ್.ಟಿ ಯಿಂದ ಹೊರಗಿಟ್ಟಿದ್ದಕ್ಕಾಗಿ ಕೇಂದ್ರ ಸರ್ಕಾರಕ್ಕೆ ಬಾಲಿವುಡ್ ನಟ ಅಕ್ಷಯ್ ಕುಮಾರ್ ಅವರು ಟ್ವೀಟರ್ ನಲ್ಲಿ ಧನ್ಯವಾದ ಸಲ್ಲಿಸಿದ್ದಾರೆ.


ಈ ಬಗ್ಗೆ ಟ್ವೀಟ್ ಮಾಡಿರುವ ನಟ ಅಕ್ಷಯ್ ಕುಮಾರ್ ಅವರು,’ ಕೆಲವು ದಿನಗಳ ಹಿಂದೆ ಕಣ್ಮೀರು ತರಿಸಿದ್ದ ವಿಷಯ ಮತ್ತೆ ಈಗ ಖುಷಿಗೆ ಕಾರಣವಾಗಿದೆ, ಮುಟ್ಟಿನ ದಿನಗಳ ಸ್ವಚ್ಛತೆಯಲ್ಲಿ ಬಹುಮುಖ್ಯ ಪಾತ್ರ ವಹಿಸುವ ಸ್ಯಾನಿಟರಿ ಪ್ಯಾಡ್ ಗಳಿಗೆ ತೆರಿಗೆ ವಿನಾಯಿತಿ ನೀಡಿರುವುದು ಸಂತೋಷದಾಯಕ ವಿಚಾರ .ದೇಶದ ಕೋಟ್ಯಾಂಟತರ ಮಹಿಳೆಯರು ಸದ್ದಿಲ್ಲದೆ ತಮ್ಮ ಕೃತಜ್ಞತೆ ಸಲ್ಲಿಸುತ್ತಾರೆ’ ಎಂದು ಹೇಳಿದ್ದಾರೆ.


ಗ್ರಾಮೀಣ ಭಾರತದಲ್ಲಿ ಹುಡುಗಿಯರ ಮುಟ್ಟಿನ ದಿನಗಳಲ್ಲಿ ಅಗತ್ಯವಿರುವ ಶುಚಿತ್ವದ ಕುರಿತಾಗಿ ಜಾಗೃತಿ ಮೂಡಿಸುವ ‘ಪ್ಯಾಡ್‌-ಮ್ಯಾನ್‌' ಚಿತ್ರದಲ್ಲಿ ನಟ ಅಕ್ಷಯ್ ಕುಮಾರ್ ಅವರು ನಟಿಸಿದ್ದರು.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ