ಪೊಲೀಸರು ನಟರಾದ ಅರ್ಜುನ್ ಕಪೂರ್ ಹಾಗೂ ರಣವೀರ್ ಸಿಂಗ್ ಅವರನ್ನು ವಿಚಾರಣೆ ಮಾಡುವುದಾದರೂ ಯಾಕೆ?

ಬುಧವಾರ, 18 ಏಪ್ರಿಲ್ 2018 (06:23 IST)
ಮುಂಬೈ : ಬೈಕ್ ಕಳವು ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ಬಾಲಿವುಡ್ ನ ಇಬ್ಬರು ನಟರಿಗೆ ಸಂಕಷ್ಟ ಎದುರಾಗುವ ಸಂಭವವಿದೆ ಎಂಬುದಾಗಿ ಮಾಹಿತಿ ತಿಳಿದುಬಂದಿದೆ.


ಮುಂಬೈ ಪೊಲೀಸರು ಬೈಕ್ ಕಳ್ಳತನ ಮಾಡಿ ಮೊಡಿಫೈ ಮಾಡುತ್ತಿದ್ದ ದರೋಡೆಕೋರರ ಗ್ಯಾಂಗವೊಂದನ್ನು ಬಂಧಿಸಿದ್ದು, ಈ ದರೋಡೆಕೋರರು ಕದ್ದು ಮೊಡಿಫೈ ಮಾಡಿದ್ದರಲ್ಲಿ ಎರಡು ಬೈಕ್ ಗಳನ್ನು ಬಾಲಿವುಡ್ ನಟರಾದ ಅರ್ಜುನ್ ಕಪೂರ್ ಹಾಗೂ ರಣವೀರ್ ಸಿಂಗ್ ಅವರಿಗೆ ನೀಡಿರುವುದಾಗಿ ವಿಚಾರಣೆಯ ವೇಳೆ ತಿಳಿಸಿದ್ದಾರೆ.


ಹಾಗೇ ನಟರು ಆ ಬೈಕ್ ಗಳನ್ನು ‘ಗುಂಡೆ’ ಚಿತ್ರದ ಚಿತ್ರಿಕರಣದ ವೇಳೆ ಬಳಸಿಕೊಂಡಿರುವುದಾಗಿ ತಿಳಿದುಬಂದಿದೆ, ಆದ ಕಾರಣ ಪೊಲೀಸರು ಬಾಲಿವುಡ್ ನಟರಾದ ಅರ್ಜುನ್ ಕಪೂರ್ ಹಾಗೂ ರಣವೀರ್ ಸಿಂಗ್ ಅವರನ್ನು ವಿಚಾರಣೆ ಮಾಡುವ ಸಂಭವವಿದೆ ಎನ್ನಲಾಗಿದೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ