ನಟಿ ಕರೀನಾರನ್ನು ಸಾಮಾಜಿಕ ಜಾಲತಾಣದಲ್ಲಿ ನೇಟಿಜನ್ ಟೀಕೆ ಮಾಡಲು ಕಾರಣವೇನು ಗೊತ್ತಾ...?

ಮಂಗಳವಾರ, 17 ಏಪ್ರಿಲ್ 2018 (15:58 IST)
ಮುಂಬೈ : ಕಥುವಾದಲ್ಲಿ ನಡೆದ ಅತ್ಯಾಚಾರ ಘಟನೆಯನ್ನು ಖಂಡಿಸಿ ಅನೇಕರು ಆಕ್ರೋಶ ವ್ಯಕ್ತಪಡಿಸಿದ್ದರು. ಆದರೆ  ಬಾಲಿವುಡ್ ನಟಿ ಕರೀನಾ ಕಪೂರ್ ಅವರು  ಈ ಬಗ್ಗೆ ಬೇಸರ ವ್ಯಕ್ತಪಡಿಸಿದ್ದಕ್ಕೆ ನೇಟಿಜನ್ ಒಬ್ಬರು ಅವರನ್ನು ಟೀಕೆಮಾಡಿದ್ದಾರೆ.

ಬಾಲಿವುಡ್ ನಟಿಯರಾದ ಕರೀನಾ ಕಪೂರ್, ಜಾವೇದ್ ಅಖ್ತರ್, ಸ್ವರಾ ಭಾಸ್ಕರ್ ಸೇರಿದಂತೆ ಹಲವರು ಈ ಘಟನೆ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ನಟಿ ಕರೀನಾ ಅವರು ಸ್ವರಾ ಪ್ಲಕಾರ್ಡ್‌ಗಳನ್ನು ಹಿಡಿದಿರುವ ಫೋಟೋಗಳನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಪೋಸ್ಟ್ ಮಾಡಿ ಅದರಲ್ಲಿ "ನಾನು ಹಿಂದೂಸ್ಥಾನಿ, ನನಗೆ ನಾಚಿಕೆಯಾಗುತ್ತಿದೆ. ನಮ್ಮ ಆಸಿಫಾಗೆ ನ್ಯಾಯ ಸಿಗಬೇಕು. ಎಂಟು ವರ್ಷದ ಆ ಮಗುವನ್ನು ಮಾತಾ ಆಲಯದ ಸಮೀಪದಲ್ಲೇ ಅತ್ಯಾಚಾರ ಮಾಡಿದರು" ಎಂದಿದ್ದಾರೆ.

 

ಇದಕ್ಕೆ ನೇಟಿಜನ್ ಒಬ್ಬರು ಕರೀನಾರನ್ನು ಉದ್ದೇಶಿಸಿ "ಒಬ್ಬ ಹಿಂದೂ ಆಗಿದ್ದು ಮುಸ್ಲಿಂರನ್ನು ಮದುವೆಯಾಗಿದ್ದಕ್ಕೆ ಕರೀನಾ ನಾಚಿಕೆ ಪಡಬೇಕು. ಮೇಲಾಗಿ ಅವರಿಗೆ ಹುಟ್ಟಿದ ಮಗುವಿಗೆ ತೈಮೂರ್ ಎಂದು ಒಬ್ಬ ರಾಕ್ಷಸನ ಹೆಸರನ್ನು ಇಟ್ಟಿದ್ದೀರಾ" ಎಂದು ಟ್ವೀಟ್ ಮಾಡಿದ್ದಾರೆ.

 

ಇದಕ್ಕೆ ಕೋಪಗೊಂಡ ಬಾಲಿವುಡ್ ನಟಿ ಸ್ವರಾ ಭಾಸ್ಕರ್ ಅವರು,’ ಇಷ್ಟಕ್ಕೂ ನಿನ್ನಂತಹವನು ಈ ಭೂಮಿ ಮೇಲೆ ಇರುವುದಕ್ಕೆ ನಾಚಿಕೆಪಡಬೇಕು. ದೇವರು ನಿನಗೆ ತಲೆಕೊಟ್ಟರೆ ಅದರಲ್ಲಿ ದ್ವೇಷವನ್ನು ತುಂಬುಕೊಂಡಿದ್ದೀಯಾ. ಭಾರತ ದೇಶಕ್ಕೆ ನೀನು ಕಳಂಕ. ನಿನ್ನಂತಹವರು ಪಬ್ಲಿಸಿಟಿಗಾಗಿ ಇಂತಹ ಕೆಲಸಗಳನ್ನು ಮಾಡುತ್ತೀರ’ ಎಂದು ಆತನನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ