ಬೆಂಗಳೂರಿನಲ್ಲಿ ಕೊರೊನಾ ಅಟ್ಟಹಾಸ; ಇಂದು ರೈಲ್ವೆ ಎಸ್ ಪಿ ಕಚೇರಿಯ ಐವರಿಗೆ ಕೊರೊನಾ

ಸೋಮವಾರ, 13 ಜುಲೈ 2020 (11:04 IST)
ಬೆಂಗಳೂರು : ಬೆಂಗಳೂರಿನಲ್ಲಿ ಕೊರೊನಾ ಅಟ್ಟಹಾಸ ಮುಂದುವರಿದಿದ್ದು, ಇಂದು ರೈಲ್ವೆ ಎಸ್ ಪಿ ಕಚೇರಿಯಲ್ಲಿ ಮತ್ತೆ ಐವರಿಗೆ ಕೊರೊನಾ ಸೋಂಕು ದೃಢಪಟ್ಟಿದೆ.

ಸಂಗೊಳ್ಳಿ ರಾಯಣ್ಣ ರೈಲ್ವೆ ಠಾಣೆಯ 7 ಸಿಬ್ಬಂದಿಗೆ ಸೋಂಕು ತಗುಲಿರುವುದು ತಿಳಿದುಬಂದಿದೆ. ಬೈಯ್ಯಪ್ಪನಹಳ್ಳಿ ರೈಲ್ವೆ ಠಾಣೆಯ ಐವರಿಗೆ ಕೊರೊನಾ ದೃಢವಾಗಿದೆ. ಆದಕಾರಣ ಬೆಂಗಳೂರು ಸಿಟಿ ರೈಲ್ವೆ ಎಸ್ ಪಿ ಲಿಮಿಟ್ಸ್ ನ ನೂರಕ್ಕೂ ಹೆಚ್ಚು ಜನರನ್ನು ಕ್ವಾರಂಟೈನ್ ಮಾಡಲಾಗಿದೆ. 10 ದಿನಗಳ ಬಳಿಕ ಕೊವಿಡ್ ವರದಿ ಬಂದಿದ್ದರಿಂದ ಈ ಅವಾಂತರ ಸೃಷ್ಟಿಯಾಗಿದೆ ಎನ್ನಲಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ