ಧರ್ಮಶಾಲಾವನ್ನು ತವರು ಮೈದಾನವಾಗಿ ಆಯ್ಕೆ ಮಾಡಿಕೊಂಡಿದ್ದ ಕಿಂಗ್ಸ್ ಇಲೆವನ್ ಪಂಜಾಬ್ , ತಮ್ಮ ಪಾಲಿಗೆ ಬಂದಿರುವ ಪಂದ್ಯಗಳನ್ನು ಎಚ್ಪಿಸಿಎ ಸ್ಟೇಡಿಯಂನಿಂದ ನಾಗಪುರದ ವಿಸಿಎ ಸ್ಟೇಡಿಯಂಗೆ ಸ್ಥಳಾಂತರ ಮಾಡುವಂತೆ ಕೋರಿದ್ದಾರೆ. ಇತ್ತೀಚಿನ ಐಪಿಎಲ್ ವೇಳಾಪಟ್ಟಿಯಲ್ಲಿ ಧರ್ಮಶಾಲಾವನ್ನು ಆಡುವ ಮೈದಾನವಾಗಿ ಹೆಸರಿಸಿಲ್ಲ.
ಎಚ್ಪಿಸಿಎ ವಕ್ತಾರ ಸಂಜಯ್ ಶರ್ಮಾ ಧರ್ಮಶಾಲಾಗೆ ಸಿಗಬೇಕಾದ ಪಾಲು ಸಿಗದಿರುವ ಬಗ್ಗೆ ಕಾಂಗ್ರೆಸ್ ನೇತೃತ್ವದ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡರು. ಕಾಂಗ್ರೆಸ್ ನೇತೃತ್ವದ ಸರ್ಕಾರದ ರಾಜಕೀಯದ ದೆಸೆಯಿಂದ ಫ್ರಾಂಚೈಸಿಗಳು ಇಲ್ಲಿ ಪಂದ್ಯ ಆಯೋಜಿಸುವ ರಿಸ್ಕ್ ತೆಗೆದುಕೊಳ್ಳುತ್ತಿಲ್ಲ. ಎಚ್ಪಿಸಿಎ ವರ್ಚಸ್ಸನ್ನು ನೇರವಾಗಿ ಅಥವಾ ಪರೋಕ್ಷವಾಗಿ ಹಾನಿ ಮಾಡಲು ಅವರು ಯತ್ನಿಸುತ್ತಿದ್ದಾರೆ. ಏಕೆಂದರೆ ಮಂಡಳಿಯ ಅಧ್ಯಕ್ಷ ಅನುರಾಗ್ ಠಾಕೂರ್ ಬಿಜೆಪಿಗೆ ಸೇರಿದವರು ಎಂದು ಅವರು ಹೇಳಿದರು.