ರಾಷ್ಟ್ರೀಯ ಮಾಧ್ಯಮವೊಂದರ ಜೊತೆ ಮಾತನಾಡಿರುವ ಬಿಸಿಸಿಐ ಹಿರಿಯ ಅಧಿಕಾರಿಯೊಬ್ಬರು, ಕೋಚ್ ಸ್ಥಾನದಲ್ಲಿ ಅನಿಲ್ ಕುಂಬ್ಳೆ ಮುಂದುವರೆಸುವ ಕುರಿತಂತೆ ನಿರ್ಧಾರ ಕೈಗೊಳ್ಳುವಾಗ ಅವರ ನಡವಳಿಕೆಗಳನ್ನೂ ಸಹ ಪರಿಗಣಿಸಲಾಗುತ್ತದೆ. ಭಾರತ ಸರಣಿ ಗೆದ್ದರೂ ಕುಂಬ್ಳೆ ಮುಂದುವರಿಕೆ 50-50 ಮಾತ್ರ. ಕುಂಬ್ಳೆ ಬಿಸಿಸಿಐ ಪ್ರೋಟೋಕಾಲ್ ವಿರುದ್ಧವಾಗಿ ನಡೆದುಕೊಂಡಿರುವುದಾಗಿ ಅವರು ತಿಳಿಸಿದ್ದಾರೆ.
ಕೋಚ್ ಒಬ್ಬರಿಂದಲೇ ತಂಡ ಗೆಲುವು ಸಾಧಿಸುವುದಿಲ್ಲ. ಕೋಚ್ ಅಷ್ಟು ಮುಖ್ಯವಾಗುವುದಾದರೆ ಟ್ಯಾಲೆಂಟೆಡ್ ಆಟಗಾರರನ್ನ ನಾವ್ಯಾಕೆ ಹುಡುಕಬೇಕು ಎನ್ನುವ ಮೂಲಕ ಕುಂಬ್ಳೆ ಮೇಲಿನ ಅಸಮಾಧಾನವನ್ನ ಹೊರಹಾಕಿದ್ದಾರೆ. ಅನಿಲ್ ಕುಂಬ್ಳೆ ಬಿಸಿಸಿಐ ಅನ್ನ ಓವರ್ ಟೇಕ್ ಮಾಡಿ ಸುಪ್ರೀಂಕೋರ್ಟ್ ನೇಮಿಸಿರುವ ಆಡಳಿತ ಸಮಿತಿ ಸದಸ್ಯರನ್ನ ಭೇಟಿಯಾಗುತ್ತಿರುವುದು ಈ ಅಸಮಾಧಾನಕ್ಕೆ ಕಾರಣ ಎನ್ನಲಾಗಿದೆ.
.
:ತಾಜಾ ಸುದ್ದಿಗಳನ್ನು ಓದಲು ವೆಬ್ದುನಿಯಾ
ಮೊಬೈಲ್ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ