ನಾನು ಟ್ರೋಫಿಯನ್ನು ಹಸ್ತಾಂತರಿಸಬೇಕಿತ್ತು. ಇದು ನನ್ನ ಸಂವಿಧಾನಿಕ ಹಕ್ಕು. ಆದರೆ ದುರದೃಷ್ಟವಶಾತ್ ನನಗೆ ಅವಕಾಶ ನೀಡಲಿಲ್ಲ. ನನ್ನ ಹಕ್ಕುಗಳನ್ನು ಅಗೌರವಿಸಲಾಯಿತು. ನಾನು ಸ್ವದೇಶಕ್ಕೆ ವಾಪಸಾದ ಕೂಡಲೇ ಇಡೀ ಜಗತ್ತಿಗೆ ಐಸಿಸಿಯಲ್ಲಿ ಏನು ನಡೆಯುತ್ತಿದೆಯೆಂದು ಬಹಿರಂಗ ಮಾಡುತ್ತೇನೆ. ಅಂತಹ ಕಿಡಿಗೇಡಿ ಕೃತ್ಯಗಳನ್ನು ಯಾರು ಮಾಡುತ್ತಿದ್ದಾರೆಂದು ತಿಳಿಸುತ್ತೇನೆ ಎಂದು ಕಮಲ್ ಬಾಂಗ್ಲಾದೇಶಿ ಚಾನೆಲ್ಗಳಿಗೆ ತಿಳಿಸಿದರು.